Kannada NewsKarnataka NewsLatest

ಮೋದಿ ಜನ್ಮ ದಿನ, ದೀನ್ ದಯಾಳ್ ಹಾಗೂ ಗಾಂಧೀ ಜಯಂತಿ ನಿಮಿತ್ತ ಬಿಜೆಪಿಯಿಂದ ಹಲವು ಕಾರ್ಯಕ್ರಮ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ಪ್ರಧಾನಮಂತ್ರಿ ನರೇಂದ್ರಮೋದಿಯವರ 70ನೇ ಜನ್ಮದಿನದ ಪ್ರಯುಕ್ತ  ಸೆಪ್ಟಂಬರ್ ೧೪ ರಿಂದ ಸೆಪ್ಟೆಂಬರ್ ೨೦, ೨೦೨೦ರತನಕ ನಡೆಯುವ ಈ ಸೇವಾ ಸಪ್ತಾಹದ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ವಿವಿಧ  ಕಾರ್ಯಕ್ರಮಗಳನ್ನು ನಡೆಸಲಿದ್ದಾರೆ.
ಪ್ರತೀ ಮಂಡಲಗಳಲ್ಲಿ ೭೦ ದಿವ್ಯಾಂಗ ವ್ಯಕ್ತಿಗಳಿಗೆ ಕೃತಕ ಅಂಗ ಜೋಡಣಾ ಉಪಕರಣಗಳನ್ನು ನೀಡುವುದು.
೭೦ ಬಡ ಪುರುಷರು ಮತ್ತು ಮಹಿಳೆಯರಿಗೆ ಉಚಿತ ಕನ್ನಡಕಗಳನ್ನು ನೀಡುವುದು.
ಕೋವಿಡ್ ೧೯ ರ ನಿಯಮಗಳನ್ನು ಪಾಲಿಸಿ ಪ್ರತೀಜಿಲ್ಲೆಯ ೭೦ ಆಸ್ಪತ್ರೆ ಮತ್ತು ಬಡ ಕಾಲೋನಿಗಳಲ್ಲಿ ಹಣ್ಣು ಹಂಪಲುಗಳನ್ನು ವಿತರಿಸುವುದು.
ಸ್ಥಳೀಯ ಅವಶ್ಯಕತೆಗನುಗುಣವಾಗಿ ಆಸ್ಪತ್ರೆಯ ಮೂಲಕ ಕೋವಿಡ್-೧೯ ರಿಂದ ಪೀಡಿತರಾದ ೭೦ ವ್ಯಕ್ತಿಗಳಿಗೆ ಪ್ಲಾಸ್ಮಾದಾನಮಾಡುವುದು.
ಯುವಮೋರ್ಚಾದ ವತಿಯಿಂದ ರಾಜ್ಯದಲ್ಲಿ ೭೦ ರಕ್ತದಾನ ಶಿಬಿರಗಳನ್ನು ಮಾಡುವುದು. ಪ್ರತೀ ಜಿಲ್ಲೆಗಳಲ್ಲಿ ಕನಿಷ್ಟ ೧ ರಕ್ತದಾನ ಶಿಬಿರ ಆಯೋಜಿಸುವುದು.
ಪ್ರತೀ ಬೂತ್‌ನಲ್ಲಿ ೭೦ ವೃಕ್ಷಾರೋಪಣಕಾರ್ಯಕ್ರಮ ಮತ್ತು ಪರಿಸರ ಸಂರಕ್ಷಣೆಯ ಸಂಕಲ್ಪಕಾರ್ಯಕ್ರಮ.
ಪ್ರತೀ ಜಿಲ್ಲೆಗಳ ೭೦ ಹಳ್ಳಿಗಳಲ್ಲಿ ಸ್ವಚ್ಛತಾಅಭಿಯಾನವನ್ನು ನಡೆಸುವುದು. ಒಂದು ಬಾರಿಉಪಯೋಗಿಸುವ ಪ್ಲ್ಲಾಸ್ಟಿಕ್ನಿ ಷೇಧಿಸುವ ಸಂಕಲ್ಪವನ್ನು ಮಾಡುವುದು ಮತ್ತು ಜನರನ್ನು ಪ್ರಧಾನಮಂತ್ರಿಗಳ ಸಿಂಹವಾಣಿಯ ಈ ಕರೆಗೆ ಜೋಡಿಸುವುದು.
ಪ್ರತೀ ಜಿಲ್ಲಾ ಕೇಂದ್ರದಲ್ಲಿ ೭೦ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯಕ್ರಮಗಳನ್ನು ನಡೆಸುವುದು.
ಪ್ರಧಾನಮಂತ್ರಿಗಳ   ವ್ಯಕ್ತಿತ್ವ ಮತ್ತು ದೃಷ್ಟಿಕೋನ ಕುರಿತಂತೆ ೭೦ ದೊಡ್ಡ ವರ್ಚುವಲ್ ಸಮಾವೇಶವನ್ನು ನಡೆಸುವುದು. ಈ ಸಮಾವೇಶದಲ್ಲಿ ಸಮಾಜದ ಪ್ರಮುಖರು, ಪ್ರಬುದ್ಧ ನಾಗರಿಕರಿಂದ ಉಪನ್ಯಾಸ ಏರ್ಪಡಿಸಲಾಗುವುದು.
ಕಳೆದ ವರ್ಷ ಪ್ರಧಾನಮಂತ್ರಿಗಳ ಮೂಲಕ ಮಾಡಲಾದ ಕಾರ್ಯಗಳ ಮತ್ತು ವ್ಯಕ್ತಿತ್ವ ಕುರಿತ ಪ್ರದರ್ಶಿನಿಗಳನ್ನು ಪ್ರತಿಯೊಂದು ರಾಜ್ಯದಲ್ಲಿಆಯೋಜನೆ ಮಾಡಲಾಗಿತ್ತು. ಕೋವಿಡ್ ೧೯ನ್ನು ಗಮನದಲ್ಲಿಟ್ಟುಕೊಂಡು ಅದರಲ್ಲಿಯ ೭೦ ಸ್ಲೈಡ್‌ಗಳನ್ನು ಈ ವರ್ಷವೂ ಪ್ರದರ್ಶಿಸುವುದು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅದನ್ನು ಪ್ರಚಾರ ಮಾಡುವುದು.

ಪಂ.ದೀನದಯಾಳ್ ಜಯಂತಿ- ಸೆಪ್ಟೆಂಬರ್ ೨೫

ಸೆಪ್ಟೆಂಬರ್ ೨೫ಕ್ಕೆ ಪಂ.ದೀನದಯಾಳ್ ಉಪಾಧ್ಯಾಯರವರ ಜನ್ಮ ದಿನ. ಪಕ್ಷದ ಮೂಲಕ ಬೂತ್ ಸ್ತರದಲ್ಲಿಆಯೋಜಿಸಲ್ಪಡುವ ೬ ಅಖಿಲ ಭಾರತ ಕಾರ್ಯಕ್ರಮಗಳಲ್ಲಿ ಈ ಕಾರ್ಯಕ್ರಮವೂ ಒಂದು.
ಎಲ್ಲಾ ಬೂತ್‌ಗಳಲ್ಲಿ ಪಂ.ದೀನದಯಾಳ್ ಜೀಯವರ ಪ್ರತಿಮೆಗಳಿಗೆ / ಭಾವಚಿತ್ರಗಳಿಗೆ ಮಾಲಾರ್ಪಣೆ ಮತ್ತು ಪುಷ್ಪಾರ್ಚನೆಯನ್ನುಮಾಡುವುದು. ಎಲ್ಲಾಕಾರ್ಯಕರ್ತರುತಮ್ಮ ಮನೆಗಳಲ್ಲಿ
ಪಂ.ದೀನದಯಾಳ್‌  ಪ್ರತಿಮೆ / ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನುಮಾಡುವುದು.
ಕೋವಿಡ್ ೧೯ನ್ನು ಗಮನದಲ್ಲಿಟ್ಟುಕೊಂಡು ವೆಬಿನಾರ್ ಮೂಲಕ ಪ್ರತೀ ಜಿಲ್ಲೆಗಳಲ್ಲಿ ಪಕ್ಷದ ವಿಚಾರಧಾರೆ ಮತ್ತು ಪಂ.ದೀನದಯಾಳ್‌ ಜೀವನಕುರಿತುಉಪನ್ಯಾಸ ಕಾರ್ಯಕ್ರಮಗಳನ್ನು ನಡೆಸುವುದು.

ಗಾಂಧಿಜಯಂತಿ- ೨ ಅಕ್ಟೋಬರ್

ಅಕ್ಟೋಬರ್ ೨ ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ ಜಯಂತಿ. ಕಳೆದ ವರ್ಷದೇಶಾದ್ಯಂತ ಗಾಂಧಿ ಸಂಕಲ್ಪ ಯಾತ್ರೆಯನ್ನು ಆಯೋಜನೆ ಮಾಡಲಾಗಿತ್ತು ಮತ್ತುಅವರ ಸ್ವದೇಶೀ, ಸ್ವಭಾಷಾ, ಸ್ವಭೂಷಣ, ಖಾದಿ, ಸ್ವಾವಲಂಬನೆ, ಸರಳತೆ, ಸ್ವಚ್ಛತೆ ಕುರಿತ ಅಭಿಯಾನವನ್ನು ಕೈಗೊಳ್ಳಲಾಗಿತ್ತು.
೨೫ ಸೆಪ್ಟೆಂಬರ್‌ನಿಂದ ೨ ಅಕ್ಟೋಬರ್‌ವರೆಗೆ ಪ್ರಧಾನಮಂತ್ರಿಗಳು ದೇಶಕ್ಕೆ ನೀಡಿದ್ದ ‘ಆತ್ಮನಿರ್ಭರ ಭಾರತ’ದ ಸಂಕಲ್ಪವನ್ನು ವಿವಿಧ ಪ್ರಕಾರಗಳ ಸಂವಾದ ಕಾರ್ಯಕ್ರಮಗಳ ಮೂಲಕ ಜನಮನಗಳಿಗೆ ತಲುಪಿಸುವ ಯೋಜನೆಯನ್ನು ಮಾಡಲಾಗಿದೆ. ಖಾದಿ ಉಪಯೋಗ ಮತ್ತು ಸ್ಥಾನೀಯ ಉತ್ಪಾದನೆಗಳನ್ನು ಪ್ರೋತ್ಸಾಹಿಸುವ ಅಭಿಯಾನ .
ಪ್ರಧಾನಮಂತ್ರಿಗಳ ಮೂಲಕ ಘೋಷಣೆಯಾಗಿದ್ದ ೨೦ ಲಕ್ಷ ಕೋಟಿ ಆತ್ಮನಿರ್ಭರ ಪ್ಯಾಕೇಜ್‌ನ ವಿವಿಧ ಯೋಜನೆಗಳನ್ನು ಬೂತ್ ಸ್ತರದ ತನಕ ಪ್ರಚಾರ – ಪ್ರಸಾರಮಾಡುವುದು. ಈ ಮೂಲಕ ಜನಸಾಮಾನ್ಯರಿಗೆ ಈ ಯೋಜನೆಗಳ ಕುರಿತು ಮಾಹಿತಿ ಮತ್ತುಅದರ ಉಪಯೋಗ ಸಿಗುವಂತಾಗಬೇಕೆನ್ನುವುದು ಇದರ ಉದ್ದೇಶ.
ಪ್ರತೀ ಜಿಲ್ಲೆಗಳಲ್ಲಿ ಆತ್ಮನಿರ್ಭರ ಪ್ಯಾಕೇಜ್‌ನ ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ವೆಬಿನಾರ್ ಸಭೆಗಳ ಮೂಲಕ ವಿಷಯತಜ್ಞರರಿಂದ ಉಪನ್ಯಾಸಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗುವುದು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಬೆಳಗಾವಿ ಜಿಲ್ಲಾ ಅಧ್ಯಕ್ಷ ಸಂಜಯ ಪಾಟೀಲ ಈ ಎಲ್ಲ ಮಾಹಿತಿ ನೀಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ ಮೋಹಿತೆ, ರಾಜು ಚಿಕ್ಕನಗೌಡರ, ಜಿಲ್ಲಾ ಮಾಧ್ಯಮ ಪ್ರಮುಖ ಎಫ್.ಎಸ್.ಸಿದ್ದನಗೌಡರ, ಕಾರ್ಯಾಲಯ ಕಾರ್ಯದರ್ಶಿ ವೀರಭದ್ರಯ್ಯ ಪೂಜೇರ, ನಿತೀನ ಚೌಗುಲೆ, ಸಿದ್ದಯ್ಯಾ ಹಿರೇಮಠ ಇವರು ಉಪಸ್ಥಿತರಿದ್ದರು.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button