Latest

ಮಾಳಿ ಮಾಲಗಾರ ಸಮಾವೇಶ ಉದ್ಘಾಟನೆಗೆ ಸಿಎಂ ಬೊಮ್ಮಾಯಿ ಆಗಮನ

ಪ್ರಗತಿವಾಹಿನಿ ಸುದ್ದಿ; ಮುಗಳಖೋಡ: ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಸುಕ್ಷೇತ್ರ ಮುಗಳಖೋಡ ಪಟ್ಟಣದ ಬಿ.ಎನ್.ಕೆ ಹೈಸ್ಕೂಲ್ ಮೈದಾನದಲ್ಲಿ  ಡಿಸೆಂಬರ್ 26 ರಂದು ಮಾಳಿ ಸಮಾಜ ಸಮಾವೇಶ ನಡೆಯಲಿದ್ದು, ಈ ಸಮಾವೇಶಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸಲಿದ್ದಾರೆ.

ಮುಗಳಖೋಡ ಪಟ್ಟಣದ ಹಿರಿಯರು, ಅಖಿಲ ಕರ್ನಾಟಕ ಮಾಳಿ ಸಮಾಜ ನಿಯೋಗದ ಅಧ್ಯಕ್ಷರು ಹಾಗೂ ಮಾಜಿ ಜಿ.ಪಂ ಸದಸ್ಯರಾದ ಡಾ.ಸಿ.ಬಿ.ಕುಲಿಗೋಡ ಅವರು ಇಂದು ಬೆಂಗಳೂರಿನಲ್ಲಿ ಮಾಜಿ ಉಪಮುಖ್ಯಮಂತ್ರಿ ಹಾಗೂ ಹಾಲಿ ಎಂ ಎಲ್ ಸಿ ಲಕ್ಷ್ಮಣ ಸವದಿ, ಅರಭಾವಿ ಮತಕ್ಷೇತ್ರದ ಶಾಸಕರಾದ ಬಾಲಚಂದ್ರ ಜಾರಕಿಹೊಳಿ, ಅಥಣಿ ಮತಕ್ಷೇತ್ರದ ಶಾಸಕರಾದ ಮಹೇಶ ಕುಮಟಳ್ಳಿ, ತೇರದಾಳ ಮತಕ್ಷೇತ್ರದ ಶಾಸಕರಾದ ಸಿದ್ದು ಸವದಿ ಹಾಗೂ ಕುಡಚಿ ಮತಕ್ಷೇತ್ರದ ಶಾಸಕರಾದ ಪಿ.ರಾಜೀವ ಅವರು ನೇತೃತ್ವದಲ್ಲಿ ಸಂಗಡಿಗರೊಂದಿಗೆ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಅಖಿಲ ಕರ್ನಾಟಕ ಮಾಳಿ ಸಮಾಜದ ರಾಜ್ಯ ಮಟ್ಟದ ಸಮಾವೇಶ ನಡೆಸಲು ಮಾತುಕತೆ ನಡೆಸಿ ಸಮಾವೇಶ ನಡೆಸಲು ದಿನಾಂಕವನ್ನು ನಿಗದಿಪಡಿಸಿಕೊಂಡರು.

ಜಿಲ್ಲಾ ಮಟ್ಟದ ಸಮಿತಿಯವರ, ತಾಲೂಕಾ ಮಟ್ಟದ ಸಮಿತಿಯವರ ಹಾಗೂ ಸ್ಥಳೀಯ ಮಟ್ಟದ ಸಮಿತಿಯರ ಹೆಸರುಗಳನ್ನು ಹಾಗೂ ಅವರ ಮೊಬೈಲ್ ಸಂಖ್ಯೆಯನ್ನು ಕಳುಹಿಸಲು ತಿಳಿಸಿಲಾಗಿದೆ. ಅದರೊಂದಿಗೆ ಮಾಳಿ ಸಮಾಜದ ಎಲ್ಲ ವರ್ಗದ ಸರ್ಕಾರಿ ನೌಕರರ ಹೆಸರು ಹಾಗೂ ಮೊಬೈಲ್ ಸಂಖ್ಯೆಯನ್ನು ಕ್ರೋಡೀಕರಿಸಲು ಆಯಾ ಜಿಲ್ಲೆ, ತಾಲೂಕು ಹಾಗೂ ಸ್ಥಳೀಯ ಮಟ್ಟದ ಸಮಿತಿಯವರಿಗೆ ಈ ಮೂಲಕ ತಿಳಿಸಲಾಗಿದೆ ಎಂದು ಅಖಿಲ ಕರ್ನಾಟಕ ಮಾಳಿ/ಮಾಲಗಾರ ಸಮಾಜದ ನಿಯೋಗದ ಅಧ್ಯಕ್ಷರಾದ ಡಾ.ಸಿ.ಬಿ.ಕುಲಿಗೋಡ ಅವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕಾಡು ಮಾಳಿ, ಶಂಕರ್ ಚಿವುಟಿ, ಮಹಾದೇವ ತೇರದಾಳ, ಬಸವರಾಜ ಬಾಳಿಕಾಯಿ, ಗಿರೀಶ್ ಬೂಟಾಳೆ, ರಮೇಶ್ ಯಡವನ್ನವರ, ಮಹಾಂತೇಶ ಮಾಳಿ, ಗೋಪಾಲ ಯಡವನ್ನವರ, ಮಲ್ಲು ಬಾಳಿಕಾಯಿ, ಸಂಜೀವ ಅಥಣಿ, ಶ್ರೀಶೈಲ ಹಳ್ಳದಮಠ, ಸದಾಶಿವ ಹೊಸಮನಿ ಮುಂತಾದವರು ಉಪಸ್ಥಿತರಿದ್ದರು.

ಪ್ರಮುಖ ಸ್ಥಳಗಳಲ್ಲಿ ಕಟ್ಟೆಚ್ಚರಕ್ಕೆ ಸೂಚನೆ

https://pragati.taskdun.com/mangalore-blast-casebasavaraj-bommaireaction/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button