
ಪ್ರಗತಿ ವಾಹಿನಿ, ಬೆಳಗಾವಿ –
ಯಮಕನಮರಡಿಯಲ್ಲಿ ಸೆ.5 ರಂದು ಯುವಕನೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದ ಪೊಲೀಸರು ಐದು ಜನರನ್ನು ಬಂಧಿಸಿದ್ದಾರೆ. ಸಂತೋಷ ಗುರವ್, ಈರಣ್ಣ ಹಿಣ್ಣಕ್ಕನವರ್, ಆದಿತ್ಯ ಪ್ರಕಾಶ ಗಣಾಚಾರಿ, ಮಹಾಂತೇಶ ಈರಪ್ಪ ಕರಗುಪ್ಪಿ ಹಾಗೂ ಶನೂರ ಗಜರಾಸಾಬ್ ನದಾಫ್ ಬಂಧಿತ ಆರೋಪಿಗಳು. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ವಿನಾಯಕ ಸೋಮಶೇಖರ ಹೋರಕೇರಿ ( 28) ನವೀನ ದಾಬಾ ಬಳಿ ದ್ವಿ ಚಕ್ರ ವಾಹನದ ಮೇಲೆ ಬರುವಾಗ ಬೆನ್ನತ್ತಿ ಬಂದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು.
ಈ ಯುವಕ ಶನಿವಾರವಷ್ಟೇ ಹುಟ್ಟು ಹಬ್ಬವನ್ನು ಆಚರಣೆ ಮಾಡಿಕೊಂಡಿದ್ದ. ಮರುದಿನ ಈ ಘಟನೆ ನಡೆದಿತ್ತು.
ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ – ಹುಟ್ಟುಹಬ್ಬದ ಮರುದಿನವೇ ಯುವಕನ ಕೊಲೆ
https://pragati.taskdun.com/crime-news/murder-bjp-youth-leader-latenight-mangaluru/