Kannada NewsKarnataka NewsLatest

*ಈ ಬಾರಿಯೂ ಅಂಬಾರಿಯನ್ನು ಹೊರಲಿದೆ ಅಭಿಮನ್ಯು*

ಮೈಸೂರು ದಸರಾ: ಗಜಪಯಣಕ್ಕೆ ಚಾಲನೆ

ಪ್ರಗತಿವಾಹಿನಿ ಸುದ್ದಿ; ಮೈಸೂರು: ಮೈಸೂರು ದಸರಾ ಮಹೋತ್ಸವಕ್ಕೆ ಕೆಲವೇ ದಿನಗಳು ಬಾಕಿಯಿದ್ದು, ಇಂದು ಅಭಿಮನ್ಯು ನೇತೃತ್ವದಲ್ಲಿ ೯ ಗಜಪಡೆಗಳ ಪಯಣಕ್ಕೆ ಅಧಿಕೃತ ಚಾಲನೆ ನೀಡುವ ಮೂಲಕ ದಸರಾಗೆ ಮುನ್ನುಡಿ ಬರೆಯಲಾಯಿತು.

ಈ ವೇಳೆ ಮಾತನಾಡಿದ ಅರಣ್ಯ ಸಚಿವ ಈಶ್ವರ ಖಂಡ್ರೆ, ದಸರಾ ಮಹೋತ್ಸವದಲ್ಲಿ ಭಗವಹಿಸುವ ಗಜಪಡೆಗಳ ಪಯಣಕ್ಕೆ ಇಂದು ಚಾಲನೆ ನೀಡಲಾಗಿದೆ. ಈ ಬಾರಿಯೂ ಅಭಿಮನ್ಯು ಆನೆಯೇ ಅಂಬಾರಿ ಹೊರಲಿದೆ ಎಂದರು.

ಐತಿಹಾಸಿಕ ದಸರಾ ಆರಂಭವಾಗಿದ್ದು, ಗಜಪಯಣಕ್ಕೆ ವಿದ್ಯುಕ್ತ ಚಾಲನೆ ಸಿಕ್ಕಿದೆ. ಕಾಡಿನಿಂದ ನಾಡಿಗೆ ಆನೆಗಳು ಸಾಗುತ್ತಿವೆ. ಈ ಬಾರಿ ಅಂಜನ್ ಎಂಬ ಆನೆ ಗಜಪಡೆಗೆ ಹೊಸದಾಗಿ ಸೇರ್ಪಡೆಯಾಗಿದೆ ಒಂದುವರೆ ತಿಂಗಳು ಗಜಪಡೆಗಳು ತಾಲೀಮಿನಲ್ಲಿ ಭಗವಹಿಸಲಿವೆ. ನಿಶಾನೆಗಳನ್ನು ಇನ್ನೂ ನಿರ್ಧಾರ ಮಾಡಿಲ್ಲ. ನಾಡ ಅದಿದೇವತೆ ಚಾಮುಂಡೇಶ್ವರಿ ಆಶಿರ್ವಾದ ಸಮಸ್ತ ನಾಡಿನ ಜನತೆ ಮೇಲೆ ಇರಲಿ ಎಂದು ಸಚಿವರು ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button