Kannada NewsLatest

ನವೋದ್ಯಮಿ ಪ್ರಗತಿ ತರಬೇತಿ

ನವೋದ್ಯಮಿ ಪ್ರಗತಿ ತರಬೇತಿ

ಪ್ರಗತಿವಾಹಿನಿ ಸುದ್ದಿ : ದೇಶಪಾಂಡೆ ಪ್ರತಿಷ್ಠಾನದ ನವೋದ್ಯಮಿ ಕಾರ್ಯಕ್ರಮದಡಿಯಲ್ಲಿ ದಿನಾಂಕ 25ನೇ ಜುಲೈ ನಿಂದ 27ನೇ ಜುಲೈ 2019 ವರೆಗೆ ಬೆಳಿಗ್ಗೆ 10 ರಿಂದ ಸಾಯಂಕಾಲ 4 ರವರೆಗೆ “ನವೋದ್ಯಮಿ ಪ್ರಗತಿ ತರಬೇತಿ”ಯು ಪ್ರಾಥಮಿಕ ಕೃಷಿ ಪತ್ತಿನ ಬ್ಯಾಂಕ್ ಕಾರ್ಯಾಲಯ, ಕರೋಶಿಯಲ್ಲಿ ಉಚಿತವಾಗಿ ಜರಗಿತು.

ಈ ತರಬೇತಿಯಲ್ಲಿ 25 ಕ್ಕೂ ಅಧಿಕ ಮಹಿಳೆಯರು ಪಾಲ್ಗೊಂಡಿದ್ದು ತರಬೇತಿಯಿಂದ ಆರ್ಟಿಕಲ್ ಪೇಟಿಂಗ್, ಬಟ್ಟೆ ಪೇಟಿಂಗ್, ಡಿಸೈನ್ ವರ್ಕ್ಸ, ಗ್ಲಾಸ್ ಪೇಟಿಂಗ್ ಹೀಗೆ ಇನ್ನೂ ಹಲವು ತರಹದ ಡಿಸೈನನ್ನು ಈ ತರಬೇತಿಯಲ್ಲಿ ಕಲಿತರು.

ಈ ತರಬೇತಿಯಲ್ಲಿ ಮಹೇಶ ಭಾತೆ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಹಾಗೂ ಅವರ ಪತ್ನಿ   ಗೀತಾ ಭಾತೆ,  ಸಾವಿತ್ರಿ ಜ್ಯೇದ್ಯ, ಗ್ರಾಮ ಪಂಚಾಯತ್, ಉಪಾಧ್ಯಕ್ಷರು, ಕರೋಶಿ ಮತ್ತು  ವಿಜಯ ಕೋಟಿವಾಲೆ, ಗಾಮ್ ಪಂಚಾಯತ್ ಸದಸ್ಯರು, ಕರೋಶಿ ಇವರು ಮಹಿಳೆಯರಿಗೆ ಪ್ರೋತ್ಸಾಹಿಸಿದರು.ನವೋದ್ಯಮಿ ಪ್ರಗತಿ ಪೆವಿಕ್ರೀಲ ತರಬೇತಿ

ಈ ತರಬೇತಿಯನ್ನು ಉದ್ದೇಶಿಸಿ ಮಾತನಾಡಿದ  ಗೀತಾ ಭಾತೆಯವರು ಮಹಿಳೆಯರು ಸ್ವಾವಲಂಬಿಯಾಗಬೇಕಾದರೆ ಈ ತರಹದ ತರಬೇತಿಗಳು ಅವಶ್ಯಕ ಹಾಗೂ ಈ ಹವ್ಯಾಸವನ್ನೇ ವ್ಯವಹಾರವಾಗುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕೆಂದು ತಿಳಿಸಿದರು.

ಈ ಮೂರು ದಿನದ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಸುನೀಲ ಹಿರೇಮಠ, ನವೋದ್ಯಮಿ ಕಾರ್ಯಕ್ರಮದ ಸಂಚಾಲಕ ಪರಮೇಶ್ವರ ಗಡೇದ, ನವೋದ್ಯಮಿ ಕಾರ್ಯಕ್ರಮದಲ್ಲಿ ಬಿಜ್ ಸಖಿಯಾಗಿ ಆಯ್ಕೆಯಾದ  ರೇಖಾ ಮುಗಳಿ ಮತ್ತು ಭಾರತಿ ಬಡಿಗೇರವರು ಈ ತರಬೇತಿಯು ಯಶಸ್ವಿಯಾಗುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿದರು.////

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button