Kannada NewsKarnataka News

ಶ್ರೀ ೧೦೮ ಸುಖಸಾಗರ ಮಹಾರಾಜರ ಚಾತುರ್ಮಾಸ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ಸಂತಶಿರೋಮಣಿ ಆಚಾರ್ಯ ಶ್ರೀ ವಿದ್ಯಾಸಾಗರ ಮಹಾರಾಜರ ಪರಮ ಶಿಷ್ಯರಾದ ಮುನಿಶ್ರೀ ೧೦೮ ಸುಖಸಾಗರ ಮಹಾರಾಜರ ೩೩ನೇ ಚಾತುರ್ಮಾಸ ವೃತ ಬೆಳಗಾವಿಯ ಉಪನಗರವಾದ ಬಸವನ ಕುಡಚಿಯಲ್ಲಿ ದಿನಾಂಕ ೦೪-೦೭-೨೦೨೦ ಶನಿವಾರದಂದು ಭ. ಶ್ರೀ ೧೦೦೮ ಶಾಂತಿನಾಥ ದಿಗಂಬರ ಜೈನ ಮಂದಿರದಲ್ಲಿ ಸ್ಥಾಪನೆಗೊಳ್ಳುವುದು.

ಈ ಮೊದಲು ೨೨ವರ್ಷಗಳ ಹಿಂದೆ ೧೯೯೭ರಲ್ಲಿ ಮಹಾರಾಜರ ಚಾತುರ್ಮಾಸವು ಜರುಗಿತ್ತು. ಆಗಿನಿಂದ ಬಸವನ ಕುಡಚಿಯಲ್ಲಿ ಅನೇಕ ಯುವಕರು ವ್ಯಸನ ಮುಕ್ತರಾಗಿ ಧರ್ಮಪ್ರಭಾವಣೆಯಲ್ಲಿ ಸದ್ಧರ್ಮಿಗಳಾಗಿ ಸಮಾಜ ಕಾರ್ಯಗಳಲ್ಲಿ ನಿರತರಾಗಿದ್ದಾರೆ.

Home add -Advt

ಶ್ರೀ ಸುಖಸಾಗರ ಮಹಾರಾಜರು ಕರ್ನಾಟಕದ ಚಿಕ್ಕ-ಚಿಕ್ಕ ಹಳ್ಳಿಗಳಲ್ಲಿ ತೆರಳಿ ಧರ್ಮ ಪ್ರಭಾವನೆ ಮಾಡಿ ಸಮಾಜವನ್ನು ವ್ಯಸನಮುಕ್ತ ಹಾಗೂ ದೇಶದ ಒಳ್ಳೆಯ ನಾಗರಿಕರನ್ನು ನಿರ್ಮಿಸುತ್ತಿದ್ದಾರೆ. ಮಹಾರಾಜರ ೨೦೨೦ರ ಚಾತುರ್ಮಾಸದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಸಾಮಾಜಿಕ ಅಂತರದ ಅರಿವನ್ನು ಇಟ್ಟುಕೊಂಡು ಎಲ್ಲ ಸದ್ಧರ್ಮ ಬಂದುಗಳು ಬಸವನ ಕುಡಚಿಗೆ ಬಂದು ದರ್ಶನ ಪಡೆದು ಪುಣ್ಯಸಂಪಾದಿಸಿಕೊಳ್ಳಲು ಕೋರಲಾಗಿದೆ.

Related Articles

Back to top button