Latest

ನಿಪ್ಪಾಣಿ ನಗರದಲ್ಲಿ ಶುದ್ಧ ನೀರಿನ ಘಟಕವನ್ನು ಉದ್ಘಾಟಿಸಿದ ಸಂಸದ ಅಣ್ಣಾಸಾಹೇಬ ಜೊಲ್ಲೆ

ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ ನಿಪ್ಪಾಣಿಯ ನರವೀರ ತಾನಾಜಿ ಚೌಕದಲ್ಲಿ, ನಗರಸಭೆಯ 14ನೇ ಹಣಕಾಸು ಯೋಜನೆಯಡಿಯಲ್ಲಿ ಮಂಜೂರಾದ 7.50 ಲಕ್ಷ ರೂ. ಮೊತ್ತದಲ್ಲಿ, ನಿರ್ಮಾಣವಾದ ಶುದ್ಧ ಕುಡಿಯುವ ನೀರು ಘಟಕವನ್ನು ಚಿಕ್ಕೋಡಿ ಲೋಕಸಭೆ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಉದ್ಘಾಟಿಸಿದರು.

ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ ಅಭಿವೃದ್ಧಿ ಕಾರ್ಯಗಳೊಂದಿಗೆ ಜನರ ಹಿತ ಕಾಪಾಡುವುದು ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ಶುದ್ಧ ಕುಡಿಯುವ ನೀರು ಪೂರೈಸುತ್ತಿದ್ದು, ಸಾರ್ವಜನಿಕರು ಹಿತಮಿತವಾಗಿ ನೀರಿನ ಸದ್ಭಳಕೆ ಮಾಡಿ, ಸದೃಢ ಆರೋಗ್ಯ ನಿಮ್ಮದಾಗಲಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ಚಂದ್ರಕಾಂತ ಕೋಟಿವಾಲೆ, ನಗರಸಭೆ ಅಧ್ಯಕ್ಷರಾದ ಜಯವಂತ ಭಾಟಲೆ, ಉಪಾಧ್ಯಕ್ಷರಾದ ನೀತಾ ಬಾಗಡಿ, ಸದಸ್ಯರಾದ ರಾಜು ಗುಂದೆಶಾ, ಸಂತೋಷ ಸಾಂಗಾವಕರ, ವಿನಾಯಕ ವಡೆ, ಸಂತೋಷ ಮಾನೆ, ಉಪಾಸನಾ ಗಾರವೆ, ಆಶಾ ಟವಳೆ, ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಬಿಜೆಪಿ ಶಾಸಕರನ್ನು ಸಂಪರ್ಕಿಸಿದ ಡಿಕೆಶಿ; ವಿಪಕ್ಷಗಳ ಬಗ್ಗೆ ಕೇಸರಿ ಮುಖಂಡರಿಗೆ ಬಿಎಸ್ ವೈ ಎಚ್ಚರಿಕೆ ಪಾಠ

Home add -Advt

Related Articles

Back to top button