GIT add 2024-1
Kore@40
Beereshwara 33

ರಕ್ಷಾ ಬಂಧನ ನಡೆಸಲಾಗದ್ದಕ್ಕೆ ಲಕ್ಷ್ಮಿ ಹೆಬ್ಬಾಳಕರ್ ವಿಷಾದ

ಆಚರಣೆ ಮಾಡಲು *ಕೊರೊನಾ ವೈರಸ್* ಅಡ್ಡಿ

Anvekar 3
Cancer Hospital 2
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಪ್ರತಿ ವರ್ಷ ನಡೆಸುತ್ತಿದ್ದ ರಕ್ಷಾ ಬಂಧನ ಕಾರ್ಯಕ್ರಮವನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಈ ವರ್ಷ ರದ್ಧುಪಡಿಸಿದ್ದಾರೆ. ಇದಕ್ಕಾಗಿ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.
ಕೊರೊನಾ ವೈರಸ್ ನ ಹಿನ್ನೆಲೆಯಲ್ಲಿ ಪ್ರೀತಿಯ ಅಣ್ಣ ತಮ್ಮಂದಿರ ಆರೋಗ್ಯದ ಹಿತ ದೃಷ್ಟಿಯಿಂದ ಈ ವರ್ಷದ *ರಕ್ಷಾ ಬಂಧನ* ಕಾರ್ಯಕ್ರಮವನ್ನು ನಡೆಸಲು ಆಗದೇ ಇರುವುದಕ್ಕೆ ಮನಸ್ಸಿಗೆ ಅಸಮಾಧಾನ ಎನಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.
Emergency Service
ಪ್ರತಿ ವರ್ಷದಂತೆ ಈ ವರ್ಷದ ರಕ್ಷಾ ಬಂಧನ ಹಬ್ಬವನ್ನು ಅತೀ ವಿಜೃಂಭಣೆಯಿಂದ ಅಣ್ಣ, ತಮ್ಮಂದಿರ ನಡುವೆ ಆಚರಣೆ ಮಾಡಲು *ಕೊರೊನಾ ವೈರಸ್* ಅಡ್ಡಿಪಡಿಸಿದೆ. ಆದಷ್ಟು ಬೇಗ ಕೊರೊನಾ ವೈರಸ್  ಶಾಶ್ವತವಾಗಿ ಮಾಯವಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವ ಮೂಲಕ  ಎಲ್ಲ ಪ್ರೀತಿಯ ಸಹೋದರರಿಗೆ ನಿಮ್ಮ ಸಹೋದರಿ ಲಕ್ಷ್ಮೀ ಹೆಬ್ಬಾಳಕರ ಕಡೆಯಿಂದ ಹೃದಯಪೂರ್ವಕ *ರಕ್ಷಾಬಂಧನದ ಶುಭಾಶಯಗಳು* ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Laxmi Tai add
Bottom Add3
Bottom Ad 2