Belagavi NewsBelgaum NewsKannada NewsKarnataka News

*ಚಳಿಯಿಂದ ಉತ್ತರ ಕರ್ನಾಟಕದ ಜಿಲ್ಲೆಗಳು ತತ್ತರ: ಯೆಲ್ಲೋ ಅಲರ್ಟ್ ಘೋಷಣೆ*

ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ತೀವ್ರ ಚಳಿ, ದಟ್ಟ ಮಂಜು ಆವರಿಸಿದೆ. ಅದರಲ್ಲೂ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಚಳಿ ಹೆಚ್ಚಾಗಿದೆ. ಬೀದರ್, ಕಲಬುರಗಿ, ವಿಜಯಪುರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಮುಂದಿನ 7 ದಿನ ಮಂಜು ಬೀಳಲಿದೆ. ರಾತ್ರಿಯಲ್ಲಿ ಗರಿಷ್ಠ ತಾಪಮಾನವು ಸುಮಾರು 26°C (79°F) ನಿರೀಕ್ಷೆಯಿದೆ, ಕನಿಷ್ಠ ತಾಪಮಾನವು ಸುಮಾರು 15°C (59°F) ಇರುತ್ತದೆ. ಡಿಸೆಂಬರ್ ತಿಂಗಳ ಸರಾಸರಿ ತಾಪಮಾನ 16°C ನಿಂದ 28°C (60°F ನಿಂದ 32°F) ವರೆಗೆ ಇರುತ್ತದೆ. ಪ್ರಸ್ತುತ ತಾಪಮಾನವು ಈ ವ್ಯಾಪ್ತಿಯಲ್ಲಿಯೇ ಇರಲಿದೆ.

ದಿನವು ಬಹುತೇಕ ಮೋಡ ಕವಿದ ವಾತಾವರಣದಿಂದ ಕೂಡಿರುತ್ತದೆ, ಮಳೆಯಾಗುವ ಸಾಧ್ಯತೆ ಕಡಿಮೆ ಇರುತ್ತದೆ. ಇದರಿಂದಾಗಿ ಹಗಲಿನಲ್ಲಿ ಸಾಕಷ್ಟು ಬಿಸಿಲು ಇರುತ್ತದೆ.

ಕರಾವಳಿ ಭಾಗದಲ್ಲಿ ಮೋಡ ಕವಿದ ವಾತಾವರಣವಿದ್ದು, ಮಳೆ ನಿರೀಕ್ಷೆಯಿಲ್ಲ. ಮುಂಜಾನೆ ವಾಹನ ಸವಾರರು ಎಚ್ಚರದಿಂದಿರಲು ಸೂಚಿಸಲಾಗಿದೆ.

Home add -Advt
https://www.udayanadu.com/news-deatils.php?id=58360&ln=Kn/news

Related Articles

Back to top button