Latest

*ಮೂರು ರೈಲುಗಳ ಭೀಕರ ದುರಂತಕ್ಕೆ ಕಾರಣವೇನು? ; ಪ್ರಾಥಮಿಕ ತನಿಖೆಯಲ್ಲಿ ಮಾಹಿತಿ ಲಭ್ಯ*

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಒಡಿಶಾದ ಬಾಲ್ ಸೋರ್ ನಲ್ಲಿ ಸಂಭವಿಸಿದ ತ್ರಿವಳಿ ರೈಲು ದುರಂತಕ್ಕೆ ಕಾರಣವೇನು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿದೆ. ಕೇವಲ ಒಂದು ನಿಮಿಷದಲ್ಲಿ ಮೂರು ರೈಲುಗಳ ನಡಿವೆ ಭೀಕರ ಅಪಘಾತ ಸಂಭವಿಸಿದೆ ಎಂದು ರೈಲ್ವೆ ಬೋರ್ಡ್ ಸದಸ್ಯೆ ಜಯಾ ವರ್ಮಾ ತಿಳಿಸಿದ್ದಾರೆ.

ನವದೆಹಲಿಯಲ್ಲಿ ಮಾತನಾಡಿರುವ ಜಯಾ ವರ್ಮಾ, ಕೋರಮಂಡಲ್ ಎಕ್ಸ್ ಪ್ರೆಸ್ ರೈಲು 128 ಕಿ.ಮೀ ವೇಗದಲ್ಲಿತ್ತು. ಅಪಘಾತದಲ್ಲಿ ಕೋರಮಂಡಲ ಎಕ್ಸ್ ಪ್ರೆಸ್ ರೈಲು ಸಂಪೂರ್ಣ ಹಾನಿಯಾಗಿದೆ. ಬೆಂಗಳೂರು-ಹೌರಾ ಎಕ್ಸ್ ಪ್ರೆಸ್ 126 ಕಿ.ಮೀ ವೇಗದಲ್ಲಿತ್ತು. ಈ ರೈಲಿನ ಎರಡು ಬೋಗಿಗಳು ಹಾನಿಯಾಗಿವೆ ಎಂದು ತಿಳಿಸಿದ್ದಾರೆ.

ಸಿಗ್ನಲ್ ಸಮಸ್ಯೆಯಿಂದಾಗಿಯೇ ಮೂರು ರೈಲುಗಳ ನಡುವೆ ಅಪಘಾತ ಸಂಭವಿಸಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

https://pragati.taskdun.com/satish-jarakiholireactionbjp/

Home add -Advt

Related Articles

Back to top button