Kannada NewsKarnataka NewsLatest

*ರಾತ್ರೋರಾತ್ರಿ ವೃದ್ಧ ತಾಯಿಯನ್ನು ನಡು ರಸ್ತೆಯಲ್ಲಿ ಬಿಟ್ಟುಹೋದ ಮಗಳು-ಅಳಿಯ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಇಂದೆಂತಹ ಮನಕಲಕುವ ಘಟನೆ. ವಯಸ್ಸಾಗಿರುವ ಹೆತ್ತ ತಾಯಿಯನ್ನು ಮಗಳೊಬ್ಬರು ಮಧ್ಯರಾತ್ರಿ ಕಾರಿನಲ್ಲಿ ತಂದು ನಡುರಸ್ತೆಯಲ್ಲಿ ಬಿಟ್ಟುಹೋಗಿರುವ ಅಮಾನವೀಯ ಘಟನೆ ಬೆಂಗಳೂರಿನ ಆನೇಕಲ್ ತಾಲೂಕಿನ ವಿ.ಕಲ್ಲಹಳ್ಳಿಯಲ್ಲಿ ನಡೆದಿದೆ.

ಸುಮಾರು 80 ವರ್ಷ ವಯಸ್ಸಿನ ತಾಯಿಯನ್ನು ಮಗಳು ಹಾಗೂ ಅಳಿಯ ತಡರಾತ್ರಿ ಕಾರಿನಲ್ಲಿ ಕರೆದುಕೊಂಡು ಬಂದು ದೇವಸ್ಥಾನವೊಂದರ ಬಳಿ ನಡುರಸ್ತೆಯಲ್ಲಿ ಮಲಗಿಸಿ ಹೋಗಿದ್ದಾರೆ.

ಈ ಅಮಾನವೀಯ ಘಟನೆಯ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ. ವೃದ್ಧೆ ಮೈ ಕೊರೆಯುವ ಚಳಿಯಲ್ಲಿ, ಬೆಳಗಾಗುವವರೆಗೂ ರಸ್ತೆಯಲ್ಲಿಯೇ ನರಳಾಡಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ವೃದ್ಧೆಯನ್ನು ರಕ್ಷಿಸಿ ಉಪಹಾರ ನೀಡಿ, ಸ್ಥಳೀಯ ಆಶ್ರಮಕ್ಕೆ ಸೇರಿಸಿದ್ದಾರೆ.

ಸ್ಥಳೀಯರು ಹೇಳುವ ಪ್ರಕಾರ ವೃದ್ಧೆ ಬೊಮ್ಮಸಂದ್ರದವರಾಗಿದ್ದು, ಮಗಳು ಆಶಾರಾಣಿ ಹಾಗೂ ಅಳಿಯ ಮಂಜುನಾಥ್ ಹೊಡೆದು, ಬಡಿದು ತಡರಾತ್ರಿ ಕಾರಿನಲ್ಲಿ ತಂದು ರಸ್ತೆಯಲ್ಲಿ ಬಿಟ್ಟುಹೋಗಿದ್ದಾರೆ. ತಾನು ಮತ್ತೆ ಅವರ ಬಳಿ ಹೋಗಲ್ಲ, ಕಳುಹಿಸಬೇಡಿ ಎಂದು ವೃದ್ಧೆ ಅಳಲು ತೋಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button