Latest

ಕಾರ್ಣಿಕಕ್ಕೂ ಮುನ್ನ ಕಳಚಿ ಬಿದ್ದು ಭಗ್ನಗೊಂಡ ಮೈಲಾರಲಿಂಗೇಶ್ವರ ತ್ರಿಶೂಲ

ಪ್ರಗತಿವಾಹಿನಿ ಸುದ್ದಿ; ವಿಜಯನಗರ: ಮೈಲಾಲಿಂಗೇಶ್ವರ ಜಾತ್ರೆಯ ದಿನವೇ ದೇವಸ್ಥಾನದ ಮಹಾದ್ವಾರದ ಮುಂಭಾಗ ಇರುವ ಶಿಬಾರ ತ್ರಿಶೂಲ ಕಳಚಿ ಬಿದ್ದಿದ್ದು, ಇದು ಅಪಶಕುನವಿರಬಹುದೇ ಎಂಬ ಆತಂಕ ಭಕ್ತರಲ್ಲಿ ಮೂಡಿದೆ.

ಇಂದು ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರಲಿಂಗೇಶ್ವರದಲ್ಲಿ ಜಾತ್ರೆ ನಡೆಯಬೇಕಿದ್ದು, ಈ ವೇಳೆ ಕಾರ್ಣಿಕ ನುಡಿಯುವ ಕಾರ್ಯಕ್ರಮವಿರುತ್ತದೆ. ಆದರೆ ಕಾರ್ಣಿಕಕ್ಕೂ ಮುನ್ನವೇ ತ್ರಿಶೂಲ ಕಳಚಿ ಬಿದ್ದಿದ್ದು ಅಪಶಕುನ ಎಂಬುದು ಭಕ್ತರ ಆತಂಕ.

ಸ್ಥಳಕ್ಕೆ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಎ.ಸಿ.ಪ್ರಕಾಶ್ ಭೇಟಿ ನೀಡಿದ್ದು, ಸ್ಥಳೀಯರಿಂದ ಮಾಹಿತಿ ಪಡೆದಿದ್ದಾರೆ. ಸಂಪ್ರದಾಯದಂತೆ ಮತ್ತೊಮ್ಮೆ ತ್ರಿಶೂಲ ಪ್ರತಿಷ್ಠಾಪನೆ ಮಾಡಬೇಕು ಎಂಬ ಒತ್ತಾಯ ಕೇಳಿಬಂದಿದೆ.

Home add -Advt

Related Articles

Back to top button