Cancer Hospital 2
Beereshwara 36
LaxmiTai 5

*ಮದುವೆಯಾಗುವುದಾಗಿ ನಂಬಿಸಿ ಪೊಲೀಸ್ ಕಾನ್ಸ್ ಟೆಬಲ್ ನಿಂದಲೇ ಯುವತಿಗೆ ವಂಚನೆ*

Anvekar 3
GIT add 2024-1

ಪ್ರಗತಿವಾಹಿನಿ ಸುದ್ದಿ: ಯುವತಿಯೊಬ್ಬಳನ್ನು ಮದುವೆಯಾಗುವುದಾಗಿ ನಂಬಿಸಿ ಪೊಲೀಸ್ ಕಾನ್ಸ್ ಟೇಬಲ್ ಓರ್ವ ವಂಚಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದಲ್ಲಿ ನಡೆದಿದೆ.

ಗಿರೀಶ್ ಎಸ್.ಎಂ ಯುವತಿಗೆ ವಂಚಿಸಿರುವ ಪೊಲೀಸ್ ಪೇದೆ. ಮುಂಡಗೋಡ ಪೊಲೀಸ್ ಠಾಣೆಯ ಕಾನ್ಸ್ ಟೇಬಲ್ ಆಗಿರುವ ಗಿರೀಶ್ ವಿರುದ್ಧ ಈಗ ಅದೇ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Emergency Service

ಆರಂಭದಲ್ಲಿ ಕಾನ್ಸ್ ಟೇಬಲ್ ಗಿರೀಶ್, ಯುವತಿಯನ್ನು ಮದುವೆಯಾಗುವುದಾಗಿ ಹೇಳಿದ್ದ. ಅಲ್ಲದೆ ಯುವತಿಯಿಂದ 20 ಲಕ್ಷ ಹಣ ಪಡೆದಿದ್ದಾನೆ. ಹಣ ಪಡೆದ ಬಳಿಕ ಗಿರೀಶ್, ಯುವತಿ ಹಾಗೂ ಕುಟುಂಬಕ್ಕೆ ಮದುವೆಯಾಗಲು ಸಾಧ್ಯವಿಲ್ಲ ಎಂದಿದ್ದಾನೆ. ಹಣ ಕೇಳಿದರೆ ಕೊಟ್ಟ ಹಣವನ್ನೂ ವಾಪಾಸ್ ಕೊಡದೇ ಮೋಸ ಮಾಡಿದ್ದಾನೆ. ಇದರಿಂದ ಬೇಸತ್ತ ಯುವತಿ ತಿಂಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಎಸ್ ಪಿಗೆ ದೂರು ನೀಡಿದ್ದರು.

ಹಿರಿಯ ಪೊಲೀಸ್ ಅಧಿಕಾರಿಗಳು ಗಿರೀಶ್ ನನ್ನು ಕರೆದು ಕೇಳಿದಾಗ ಯುವತಿಗೆ ಹಣ ವಾಪಾಸ್ ಕೊಡುವುದಾಗಿ ಒಪ್ಪಿಕೊಂಡಿದ್ದ. ಆದರೆ ಈವರೆಗೂ ಹಣ ವಾಪಾಸ್ ಕೊಟ್ಟಿಲ್ಲ. ಇದರಿಂದ ನೊಂದ ಯುವತಿ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಗಿರೀಶ್ ವಿರುದ್ಧ ದೂರು ದಾಖಲಿಸಿದ್ದಾರೆ.


Bottom Add3
Bottom Ad 2