Kannada NewsLatest

ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ; ನಿಮ್ಮ ಹೆಸರು ಗೌಪ್ಯವಾಗಿರಲಿದೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅಮಾಯಕರ ಜೀವಕ್ಕೆ ಎರವಾಗುತ್ತಿರುವ ಗಾಳಿಪಟಗಳ ಮಾಂಝಾ ಬಳಕೆಗೆ ಕಡಿವಾಣ ಹಾಕಲು ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ ಅವರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದಾರೆ.

ಅಪಾಯಕಾರಿ ಗಾಳಿಪಟ ಎಳೆಗಳ ಮಾರಾಟ ಅಥವಾ ಬಳಕೆಯ ಮಾಹಿತಿಯನ್ನು 9480804000 ನಲ್ಲಿ ಹಂಚಿಕೊಳ್ಳಲು ನಾಗರಿಕರನ್ನು ಕೋರಿದ್ದಾರೆ.

ಈ ಕುರಿತು ಮಾಹಿತಿ ನೀಡಿದವರಿಗೆ ಸೂಕ್ತವಾಗಿ ಬಹುಮಾನ ನೀಡಲಾಗುವುದಲ್ಲದೆ ಮಾಹಿತಿ ನೀಡಿದವರ ಗುರುತನ್ನು ರಹಸ್ಯವಾಗಿ ಇರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಅಪಾಯಕಾರಿ ಎಳೆಗಳ ಬಳಕೆ ಮತ್ತು ಮಾರಾಟಕ್ಕೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಹ ಅವರು ತಿಳಿಸಿದ್ದಾರೆ.

Home add -Advt

ಬೆಳಗಾವಿ ನಗರದಲ್ಲಿ ದೀಪಾವಳಿಗೆ ಬಟ್ಟೆ ಖರೀದಿಸಿ ತಂದೆಯ ಬೈಕ್ ನಲ್ಲಿ ಮರಳುತ್ತಿದ್ದ ಬಾಲಕನ ಸಾವಿನ ಪ್ರಕರಣದ ನಂತರ ಈ ಬೆಳವಣಿಗೆಯಾಗಿದೆ.

ದೇಗುಲ ಉದ್ಘಾಟನಾ ಮೆರವಣಿಗೆಯಲ್ಲಿ ಕಲಶ ಹೊತ್ತು ಸಾಗಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button