Belagavi NewsBelgaum NewsKannada NewsKarnataka NewsLatest

*ಸಾರಾಯಿ ಮಾರಾಟ ಹಾಗೂ ಓಸಿ ಆಡುವರೆಗೆ ಬಿಸಿ ಮುಟ್ಟಿಸಿದ ಬೆಳಗಾವಿ ಪೊಲೀಸರು‌*

ಪ್ರಗತಿವಾಹಿನಿ ಸುದ್ದಿ: ಏಪ್ರಿಲ್ 2 ರಿಂದ ಏಪ್ರಿಲ್ 4 ರ ವರೆಗೆ ಬೆಳಗಾವಿ ನಗರ ಪೊಲೀಸ್ ಕಮಿಷನರ್ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆ ಸಿಬಂಧಿ ದಾಳಿ ಮಾಡಿ, ಅಕ್ರಮ ಸಾರಾಯಿ ಮಾರಾಟ ಹಾಗೂ ಓಸಿ ಆಡುತ್ತಿದ್ದವರ ಮೇಲೆ ದಾಳಿ ಮಾಡಿ ವಶಕ್ಕೆ ಪಡೆದು, ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.‌

ಕಾಕತಿ ಪೊಲೀಸ್‌ರಿಂದ ಅಕ್ರಮ ಸಾರಾಯಿ ವಶ: ಒಬ್ಬನ ಬಂಧನ

ಏ.2 ರಂದು ಬೆಳಗಾವಿ ನಗರದ ಹೊಸ ವಂಟಮೂರಿ ಬಾಳಯ್ಯಾ ಸ್ವಾಮಿ ಗಲ್ಲಿಯಲ್ಲಿ ಸಾರ್ವಜನಿಕರ ಸ್ಥಳದಲ್ಲಿ ಅಕ್ರಮವಾಗಿ ಬಿಯರ್ ಬಾಟಿಲಿ, ಬಿಯರ್ ಟಿನ್, ಟೆಟ್ರಾ ಪ್ಯಾಕೇಟ್ ಇತ್ಯಾದಿ ಮಾರಾಟ ಮಾಡುತ್ತಿದ್ದ ಕಾಡಪ್ಪಾ ಬಸಪ್ಪಾ ವಾಲಿಕಾರ ಎಂಬಾತನ್ನು ಕಾಕತಿ ಪೊಲೀಸರು ಬಂಧಿಸಿದರು.‌

ಕಾಕತಿ ಪಿಎಸ್‌ಐ ಮತ್ತು ತಂಡ ದಾಳಿ ಮಾಡಿ, ಬಂಧಿತನಿಂದ 6714 ರೂ 70 ಪೈಸೆಯ 14 ಲೀಟರ 250 ಎಮ್ ಎಲ್ ದಷ್ಟು ಬಿಯರ ಬಾಟಲಿಗಳನ್ನು ಮತ್ತು ಬಿಯರ ಟಿನ್ನಗಳನ್ನು ಮತ್ತು 6 ಲೀಟರ್ 300 ಎಂಎಲ್ ದಷ್ಟು ವಿಸ್ಕಿ, ಟೇಟ್ರಾ ಪೌಚ್‌ಗಳನ್ನು ವಶಕ್ಕೆ ಪಡೆದು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಲಾಗಿದೆ.‌

ಹಿರೇಬಾಗೇವಾಡಿ ಪೊಲೀಸ್‌ರಿಂದ ಅಕ್ರಮ ಸಾರಾಯಿ ಮಾರಾಟಗಾರ ಮೇಲೆ ದಾಳಿ

ಏ.2 ರಂದು ಬೆಳಗಾವಿ ನಗರದ ವಿರಪ್ಪನಕೊಪ್ಪ ಗ್ರಾಮದ ಮರಾಠಾ ಓಣಿಯಲ್ಲಿನ ಫಕೀರಪ್ಪ ದೇವರ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಸಾರಾಯಿ ಮಾರಾಟ ಮಾಡುತ್ತಿದ್ದ ವೇಳೆ ಹಿರೇಬಾಗೇವಾಡಿ ಪೊಲೀಸರು ದಾಳಿ ಮಾಡಿ, ಆರೋಪಿ, ವಿಠ್ಠಲ ಅರ್ಜುನ ವಡ್ಡಿ ಎಂಬವನ್ನು ವಶಕ್ಕೆ ಪಡೆದು ಓರಿಜನ್ ಜಾಯಿಸ್ ಬಾಟಲಿಗಳು ಹಾಗೂ 400 ರೂಪಾಯಿ ಹಣ ವಶಕ್ಕೆ ಪಡೆಯಲಾಗಿದೆ.‌

ಮಾರಿಹಾಳ ಪೊಲೀಸ್‌ರಿಂದ ಕಳ್ಳಭಟ್ಟಿ ಸಾರಾಯಿ ಮಾರಾಟಗಾರನ ಮೇಲೆ ದಾಳಿ

ಏ.3 ರಂದು ಬೆಳಗಾವಿ ನಗರದ ಮುಚ್ಚಂಡಿ ಗ್ರಾಮದ ಬುಡ್ರ್ಯಾನೂರ ಕ್ರಾಸ್ ಹತ್ತಿರ ಸಾರ್ವಜನಿಕರಿಗೆ ಅಕ್ರಮವಾಗಿ ಕಳ್ಳಭಟ್ಟಿ ಸಾರಾಯಿ ಮಾರಾಟ ಮಾಡುತ್ತಿದ ವ್ಯಕ್ತಿ ಮೇಲೆ ಮಾರಿಹಾಳ ಪಿಐ ಮತ್ತು ಅವರ ತಂಡ ದಾಳಿ ಮಾಡಿ, ಆರೋಪಿ ರವಿ ಬಸವಣ್ಣಿ ಗುಡದಯ್ಯಗೋಳ ಅವರನ್ನು ವಶಕ್ಕೆ ಪಡೆದುಕೊಂಡು 4 ಕರಿಬಣ್ಣದ ಟೈರ್ ಟೂಬದಲ್ಲಿ ಸುಮಾರು 100 ಲೀಟರ್ ಕಳ್ಳಭಟ್ಟಿ ಸಾರಾಯಿ, ಅಕಿ 1000 ರಷ್ಟು ಜಪ್ತ ಪಡಿಸಿಕೊಂಡು ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗಿದೆ.

ಮಾಳಮಾರುತಿ ಪೊಲೀಸ್‌ರಿಂದ ಓಸಿ ಮಾರಾಟಗಾರನ ಮೇಲೆ ದಾಳಿ: ಒಬ್ಬನ ಬಂಧನ

ಏ.4 ರಂದು ಬೆಳಗಾವಿ ನಗರದ ಕಣಬರ್ಗಿ ರಸ್ತೆ ಶಿವತೀರ್ಥ ಅಪಾರ್ಟಮೆಂಟ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಓಸಿ ಅಂಕಿ ಸಂಖ್ಯೆಗಳ ಮೇಲೆ ಜನರ ಕಡೆಯಿಂದ ಹಣ ಪಡೆದುಕೊಂಡು ಆಟ ಆಡುತ್ತಿದ್ದ ಬೈಲಗೊಂಗಲ ತಾಲೂಕಿನ ನೇಗಿನಾಳ ಗ್ರಾಮದ ರವಿಚಂದ್ರ ಶಿವಾನಂದ ಕುರಬರ ಅವರನ್ನು ಬಂದಿಸಿದ ಪೊಲೀಸರು ವಶಕ್ಕೆ ಪಡೆದುಕೊಂಡು ಓಸಿ ಮಟಕಾ ಚೀಟಿಗಳು ಹಾಗೂ ಹಣ 2000 ಹಣ ಜಪ್ತಿಪಡಿಸಿಕೊಂಡು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.

ತಿಲಕವಾಡಿ ಪೊಲೀಸ್‌ರಿಂದ ಓಸಿ ಮರಾಟಗಾರನ ಮೇಲೆ ದಾಳಿ: ಒಬ್ಬನ ಬಂಧನ

ಏ‌. 4 ರಂದು ಬೆಳಗಾವಿ ನಗರದ ಅನಗೋಳ ಮಾರುತಿಗಲ್ಲಿ ಮಾರುತಿ ಮಂದಿರ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ನಿಂತುಕೊಂಡು ಬೆಳಗಾವಿಯ ಮಾರುತಿಗಲ್ಲಿ ಅನಗೋಳ ನಿವಾಸಿ ಕಿರಣ ಕೃಷ್ಣಾ ಪಾಂಡುಚೆ ಅವರು, ಓ.ಸಿ. ಅಂಕಿ ಸಂಖ್ಯೆಗಳ ಮೇಲೆ ಜನರ ಕಡೆಯಿಂದ ಹಣ ಪಡೆದುಕೊಂಡು ಮಟಕಾ ಅಥವಾ ಓ.ಸಿ. ಜುಗಾರ ಆಟ ಆಡುತ್ತಿರುವರನ್ನು ವಶಕ್ಕೆ ಪಡೆದುಕೊಂಡು ಓಸಿ ಮಟಕಾ ಚೀಟಿಗಳು ಹಾಗೂ 860 ಹಣ ಜಪ್ತಿ ಪಡಿಸಿಕೊಂಡು ತಿಲಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲಾಗುತ್ತಿದೆ.‌

ಮಾರಿಹಾಳ ಪೊಲೀಸ್‌ರಿಂದ ಒಬ್ಬನ ಬಂಧನ

ಏ.4. ರಂದು ಬೆಳಗಾವಿ ನಗರದ ತುಮ್ಮರಗುದ್ದಿ ಗ್ರಾಮ ಬಸ್ ನಿಲ್ದಾಣದಲ್ಲಿ ಓ.ಸಿ. ಅಂಕಿ ಸಂಖ್ಯೆಗಳ ಮೇಲೆ ಜನರ ಕಡೆಯಿಂದ ಹಣ ಪಡೆದುಕೊಂಡು ಮಟಕಾ, ಓ.ಸಿ ಆಟ ಆಡುತ್ತಿದ್ದ ಅವರನ್ನು ಮಾರಿಹಾಳ ಪೊಲೀಸರು ಬಂದಿಸಿದ್ದಾರೆ.‌

ರಾಮಪ್ಪ ಶಿವಪ್ಪ ಬಡನಾಯಕ ಎಂಬ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಅವನಿಂದ ಓಸಿ ಮಟಕಾ ಚೀಟಿಗಳು ಹಾಗೂ ಹಣ 2260 ಜಪ್ತಿ ಪಡಿಸಿಕೊಂಡು ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗಿದೆ.

ಮೇಲಿನ ಎಲ್ಲಾ ದಾಳಿಗಳಲ್ಲಿ ಪಾಲ್ಗೊಂಡ ನಗರದ ಪಿಐ, ಮತ್ತು ಸಿಬ್ಬಂದಿಯವರ ಕಾರ್ಯವನ್ನು ಪೊಲೀಸ್ ಆಯುಕ್ತರು, ಡಿಸಿಪಿ (ಕಾ&ಸು) ಹಾಗೂ ಡಿಸಿಪಿ (ಅ&ಸಂ), ಬೆಳಗಾವಿ ನಗರ ರವರು ಶ್ಲಾಘಿಸಿದ್ದಾರೆ.

https://pragativahini.com/rameshwaram-cafe-bomb-blast-casebjp-ledernia-custody

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button