Kannada NewsKarnataka NewsLatest

ಭಾನುವಾರ ಎಲ್ಲೆಲ್ಲಿ ವಿದ್ಯುತ್ ಕಡಿತ? – ಇಲ್ಲಿದೆ ಮಾಹಿತಿ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ೧೦/೧೧ ಕೆವ್ಹಿ ವಡಗಾವಿ ವಿದ್ಯುತ್ ವಿತರಣಾ ಕೇಂದ್ರ ಬೆಳಗಾವಿಯಲ್ಲಿ ಎರಡನೇ ತ್ರೈಮಾಸಿಕ ನಿರ್ವಹಣೆ ಕಾರ್ಯಗಳು ಕೈಗೊಳ್ಳಲಿದ್ದು ಈ ಕೆಳಗಿನ ಪ್ರದೇಶಗಳಲ್ಲಿ ರವಿವಾರ ದಿನಾಂಕ ಜುಲೈ ೧೧ ರಂದು ಮುಂಜಾನೆ ೯:೦೦ ಗಂಟೆಯಿಂದ ಸಾಯಂಕಾಲ ೫ ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ವಾಗಲಿದೆ.
೧೧೦/೧೧ ಕೆವ್ಹಿ ವಡಗಾವಿ ನಿಂದ ಹೊರಡುವ ವಿದ್ಯುತ್ ನಿಲುಗಡೆಯಾಗುವ ಪೂರಕಗಳು
೧೧ ಕೆವ್ಹಿಎಫ – ಬಜಾರಗಲ್ಲಿ: ಭಾರತ್ ನಗರ್, ಲಕ್ಷ್ಮೀನಗರ, ಗಣೇಶಪುರ ಗಲ್ಲಿ, ಜೇಡಗಲ್ಲಿ, ಆಳ್ವಾಸ್ ಗಲ್ಲಿ, ಮಂಗಾಯಿ ನಗರ್, ಪಾಟೀಲ್ ಗಲ್ಲಿ, ಯರಮಾಲ ರೋಡ, ಬಜಾರ್ ಗಲ್ಲಿ, ಚಾವಡಿ ಗಲ್ಲಿ, ಎಳ್ಳುರ್ ರೋಡ್, ದತ್ತ ಗಲ್ಲಿ ರಜ್ವಡ್ ಕಂಪೌಂಡ, ಸರ್ವೋದಯ ಕಾಲನಿ, ನಾಜರ ಕ್ಯಾಂಪ್, ರಾಮದೇವ ಗಲ್ಲಿ, ಶಹಪೂರಗಲ್ಲಿ, ಮೇಘದೂತ ಸೊಸೈಟಿ, ನಾಥ ಪೈ ಸರ್ಕಲ್.ಎಫ್
೧೨ – ವಿದ್ಯಾನಗರ: ಚಿದಂಬರ ನಗರ, ಇಂದಿರಾ ನಗರ, ಜಟ್ ಪಟ್ ಕಾಲನಿ, ಬಬಲೆ ಗಲ್ಲಿ, ಬಾಂದುರ ಗಲ್ಲಿ, ಎಸ್ ವಿ ರೋಡ ರಘುನಾಥ ಪೇಟ, ನಾಥ ಪೈ ನಗರ, ೪ನೇ ರೈಲ್ವೆ ಗೇಟ್, ಲೋಹಾರ ಗಲ್ಲಿ ಸುತ್ತ ಮುತ್ತಲಿನ ಪ್ರದೇಶಗಳು. ಎಫ್
೧೩ – ಭಾಗ್ಯ ನಗರ: ಭಾಗ್ಯ ನಗರ ಪಲ್ಲೇದ ಲೇ ಔಟ್ ದಿಂದ ೯ನೇ ಕ್ರಾಸ್ ಪಾರಿಜಾತ ಕಾಲನಿ, ಕೃಷಿ ಕಾಲನಿ, ಚಿದಂಬರ ನಗರ ರಘುನಾಥ ಪೇಟ ಅನುಗೋರ್ ಮೇನ್ ರೋಡ್ ನಲ್ಲಿ ವಿದ್ಯುತ್ ವ್ಯತ್ಯಯ ವಾಗಲಿದೆ ಎಂದು ನಗರ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..

 ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ಕ.ವಿ.ಪ್ರ.ನಿ.ನಿ. ವತಿಯಿಂದ ಎರಡನೇಯ ತ್ರೈಮಾಸಿಕ ಹಾಗೂ ಇತರೆ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ಭಾನುವಾರ (ಜು.೧೧) ಹಲವೆಡೆ ವಿದ್ಯುತ್ ವ್ಯತ್ಯಯವಾಗಲಿದೆ. ೧೧೦ ಕೆ.ವ್ಹಿ. ವಡಗಾಂವ ಉಪಕೇಂದ್ರದಿಂದ ಸರಬರಾಜು ಆಗುವ ಧಾಮನೆ, ಕುರುಬರಹಟ್ಟಿ, ಮಾಸ್ಗ್ಯಾನಟ್ಟಿ, ದೇವಗಾನಟ್ಟಿ, ಔಚಾರಟ್ಟಿ, ಯರನಾಳ, ಯಳ್ಳೂರ, ಸುಳಗಾ, ರಾಜಹಂಸಗಡ, ದೇಸೂರ, ನಂದಿಹಳ್ಳಿ, ಕೊಂಡಸಕೊಪ್ಪ, ಹಲಗಾ ಹಾಗೂ ಬಸ್ತವಾಡ ಗ್ರಾಮಗಳಲ್ಲಿ ಬೆಳಿಗ್ಗೆ ೦೯.೦೦ ಗಂಟೆಯಿಂದ ಸಾಯಂಕಾಲ ೦೪.೦೦ ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಅದೇ ರೀತಿ, ೧೧೦ ಕೆ.ವ್ಹಿ. ಬೀಡಿ ಉಪಕೇಂದ್ರದಿಂದ ಈ ಕೆಳಕಂಡ ವಿವಿಧ ಪ್ರದೇಶಗಳಿಗೆ ಸರಬರಾಜು ಆಗುವ ವಿದ್ಯುತ್ ಬೆಳಿಗ್ಗೆ ೧೦.೦೦ ಗಂಟೆಯಿಂದ ಸಾಯಂಕಾಲ ೦೪.೦೦ ಗಂಟೆಯವರೆಗೆ ವ್ಯತ್ಯಯವಾಗಲಿದೆ. ಹಿಂಡಲಗಿ, ಮಂಗ್ಯಾನಕೊಪ್ಪ, ಕೇರವಾಡ, ಬೀಡಿ, ಕಕ್ಕೇರಿ, ಚುಂಚವಾಡ, ರಾಮಾಪೂರ, ಸುರಪೂರ, ಗೋಲಿಹಳ್ಳಿ, ಭುರುಣಕಿ, ಕರಿಕಟ್ಟಿ, ಗಸ್ತೋಳ್ಳಿದಡ್ಡಿ, ಗಸ್ತೊಳ್ಳಿ, ಹೊಸೆಟ್ಟಿ, ಶಿವಾಜಿ ನಗರ, ಹಾಲಜುಂಜವಾಡ, ಚನ್ನಕ್ಕೇಬೈಲ, ಮಾಸ್ಕಾನಟ್ಟಿ, ಹಲಸಾಳ, ಪಾದಲವಾಡಿ, ಅನಗಡಿ,ಕರಂಜಲ, ಪೋತೋಳಿ, ಕಾಪೋಲಿ, ಶಿವಠಾಣ, ಶಿಂಧೋಳ್ಳಿ ಬಿ.ಕೆ, ಶಿಂಧೋಳ್ಳಿ ಕೆ.ಎಚ್, ಗೋಸೆ ಬಿ.ಕೆ, ಗೋಸೆ ಕೆ.ಎಚ್, ಮಡವಾಲ, ಗೋಟಗಾಳಿ, ದೇವರಾಯಿ, ಜಂಬೇಗಾಳಿ, ನಂಜನಕೊಡಲ, ಸುಳೇಗಾಳಿ, ಹತ್ತರವಾಡ, ಮೇರ್ಡಾ, ಕಾರಟಗಿ, ಬಸ್ತವಾಡ, ಹಲಗಾ, ಹಂದೂರ, ಹುಲಕೊತ್ತಲನಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಇನ್ನು, ನವೋದಯ ನಗರ, ಕಸಮಳಗಿ, ಮುಗಳಿಹಾಳ, ಕಡತನಬಾಗೇವಾಡಿ, ಬಿಳಕೆ, ಅವರೊಳ್ಳಿ, ಚಿಕದಿನಕೊಪ್ಪ, ಕೊಡಚವಾಡ, ದೇಮಿನಕೊಪ್ಪ, ವಡ್ಡೇಬೈಲ, ಸುರಪುರ ಕೆರವಾಡ, ಚಿಕ್ಕಅಂಗ್ರೊಳ್ಳಿ, ಕುಣಕಿಕೊಪ್ಪ, ಬೇಕವಾಡ, ಬಂಕಿ, ಬಸರಿಕಟ್ಟಿ, ಜುಂಜವಾಡ ಕೆ.ಎನ್, ಗರ್ಬಾನಟ್ಟಿ, ನಂಜನಕೊಡಲ, ಸಗರೆ, ದೊಡ್ಡೇಬೈಲ, ಚನ್ನೇವಾಡಿ, ಭುತೇವಾಡಿ, ಹಲಶಿ, ಗುಂಡಪಿ, ಬೀಜಗರ್ಣಿ, ಬಂಬರಡಾ ಹಾಗೂ ಮೆಂಡಗಾಳಿ ಗ್ರಾಮಗಳಲ್ಲಿಯೂ ಸಹ ಬೆಳಿಗ್ಗೆ ೧೦.೦೦ ಗಂಟೆಯಿಂದ ಸಾಯಂಕಾಲ ೦೪.೦೦ ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹು.ವಿ.ಸ.ಕಂ.ನಿಗಮ ಗ್ರಾಮೀಣ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚಿಕ್ಕೋಡಿಯಲ್ಲಿ ಇಂದು ನಾಲ್ವರ ಸಾವು

ಜುಲೈ 19ರಿಂದ ಮತ್ತೆ ರಾಜ್ಯದಲ್ಲಿ ಲಾಕ್ ಡೌನ್?

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button