
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಆಚಾರ್ಯ ಶ್ರೀ ೧೦೮ ಕಾಮಕುಮಾರನಂದಿ ಮಹಾರಾಜರ ಹತ್ಯೆ ಖಂಡಿಸಿ ಭಾನುವಾರ ಪ್ರತಿಭಟನೆ ನಡೆಸಲು ಜೈನ ಸಮುದಾಯ ನಿರ್ಧರಿಸಿದೆ.
ಸುವರ್ಣ ವಿಧಾನಸೌಧ (ಹಲಗಾ) ಹತ್ತಿರ 11 ಗಂಟೆಗೆ ಬಾಲಾಚಾರ್ಯ ಶ್ರೀ ೧೦೮ ಸಿದ್ಧಸೇನ ಮುನಿ ಮಹಾರಾಜರ ಸಾನಿಧ್ಯದಲ್ಲಿ ಈ ಪ್ರತಿಭಟನೆ ನಡೆಯುವುದು. ಜೈನ ಧರ್ಮದ ಸಾಧುಗಳಿಗೆ ಸುರಕ್ಷೆ ನಿಡುವಂತೆ ಆಗ್ರಹಿಸಿ ಪ್ರತಿಭಟನೆ ಮಾಡಲಾಗುವುದು. ಬೆಳಗಾವಿಯ ಸಮಸ್ತ ಜೈನ ಸಮಾಜ ಸೇರಿಕೊಂಡು ಉಗ್ರ ಪ್ರತಿಭಟನೆ ನಡೆಸಲಾಗುವದು ಎಂದು ಪ್ರಕಟಣೆ ತಿಳಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ