Kannada NewsLatest

ಸಿಡಿ ಪ್ರಕರಣ; ದೂರು ನೀಡಲು ಮುಹೂರ್ತ ನಿಗದಿ ಮಾಡಿದ ರಮೇಶ್ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ  ದೂರು ನೀಡಲು ನಿರ್ಧರಿಸಿದ್ದು, ಸೋಮವಾರ ದೂರು ನೀಡಲು ಮುಹೂರ್ತ ನಿಗದಿ ಮಾಡಿದ್ದಾರೆ.

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಬಹಿರಂಗಗೊಂಡು 10 ದಿನಗಳಾಗಿದ್ದು,  ಸೋಮವಾರ ಪ್ರಕರಣ ಸಂಬಂಧ ದೂರು ದಾಖಲಿಸಲು ನಿರ್ಧರಿಸಿದ್ದಾರೆ.

ಈಗಗಾಲೇ ಸುಪ್ರೀಂ ಕೋರ್ಟ್ ವಕೀಲರು ಸೇರಿದಂತೆ ಹಲವು ಕಾನೂನು ತಜ್ಞರ ಜೊತೆ ಚರ್ಚೆ ನಡೆಸಿದ್ದು, ದೂರಿನಲ್ಲಿ 2 ಅಥವಾ 3 ಪ್ರಭಾವಿ ನಾಯಕರ ಹೆಸರನ್ನು ಕೂಡ ಉಲ್ಲೇಖ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ರಮೇಶ್ ಜಾರಕಿಹೊಳಿ ನೀಡಿದ ದೂರಿನ ಆಧಾರದ ಮೇಲೆ ಎಸ್ ಐಟಿ ತನಿಖೆ ನಡೆಸಲಿದ್ದು, ಠಾಣೆಯಲ್ಲಿ ಎಫ್ ಐ ಆರ್ ಹಾಕಿ ಎಸ್ ಐಟಿ ತನಿಖೆ ನಡೆಸಲಿದೆ.

Home add -Advt

Related Articles

Back to top button