Kannada NewsKarnataka NewsLatestPolitics

*ರಂಗೋಲಿಯಲ್ಲಿ ಅರಳಿದ ಸಿಎಂ, ಡಿಸಿಎಂ, ಸಚಿವರು*


ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯಾದ್ಯಂತ 68ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ಕಠೀರವ ಕ್ರೀಡಾಂಗಣದಲ್ಲಿ ರಂಗೋಲಿಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಚಿವರನ್ನು ಬಿಡಿಸಲಾಗಿದ್ದು, ಕಲಾವಿದರ ಕೈ ಚಳಕ ಎಲ್ಲರನ್ನೂ ನಿಬ್ಬೆರಗಾಗುವಂತೆ ಮಾಡಿದೆ.

ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ರಂಗೋಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಚಿತ್ರಗಳನ್ನು ಬರೆಯಲಾಗಿದೆ. ರಂಗೋಲಿಯಲ್ಲಿ ಅರಳಿದ ತಮ್ಮ ಭಾವಚಿತ್ರವನ್ನು ವೀಕ್ಷಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್ ಕಲಾವಿದರ ನೈಪುಣ್ಯಕ್ಕೆ ಬೆರಗಾದರು.


Home add -Advt

Related Articles

Back to top button