Kannada NewsKarnataka NewsLatest

​ ತ್ಯಾಗ, ಸರಳತೆ ಮತ್ತು ಸ್ವಹಿತ ರಹಿತ ಚಿಂತನೆ ನಾಯಕತ್ವದ ಪ್ರಮುಖ ಗುಣ ಲಕ್ಷಣಗಳು ​- ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ 

ಪ್ರಗತಿವಾಹಿನಿ ಸುದ್ದಿ, ​ಘಟಪ್ರಭ –  ತ್ಯಾಗ, ಸರಳತೆ ಮತ್ತು ಸ್ವಹಿತ ರಹಿತ ಚಿಂತನೆ ನಾಯಕತ್ವದ ಪ್ರಮುಖ ಗುಣ ಲಕ್ಷಣಗಳು ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹೇಳಿದ್ದಾರೆ.
ಘಟಪ್ರಭಾ ಸೇವಾದಳ ತರಬೇತಿ ಶಿಬಿರದಲ್ಲಿ ಆಯೋಜಿಸಲಾಗಿದ್ದ ಮೂರು ದಿನಗಳ ಎನ್ಎಸ್ ಯುಐ ಪದಾಧಿಕಾರಿಗಳ ತರಬೇತಿ ಶಿಬಿರ ” ಚಿಂತನ – ಮಂಥನ ” ಕಾರ್ಯಕ್ರಮದಲ್ಲಿ ಸೋಮವಾರ ಸಂಜೆ ಅವರು ಮಾತನಾಡಿದರು.
​ ನಾಯಕತ್ವದ ಗುಣಗಳ ಹಾಗೂ ಮಹಿಳಾ ಸಬಲೀಕರಣದ ಬಗ್ಗೆ​ ಅವರು  ಮಾತನಾಡಿದ​ರು. ಉತ್ತಮ ನಾಯಕನಾಗುವ ಆಸೆ ಎಲ್ಲರ​ಲ್ಲೂ ರುತ್ತದೆ. ಆದರೆ ಯಶಸ್ವಿ ನಾಯಕನಾಗಲು ಕೆಲವು ವಿಶೇಷ ಗುಣಗಳನ್ನು ಹೊಂದಿರಬೇಕಾಗುತ್ತದೆ. ನಾಯಕತ್ವದ ಮುಖ್ಯ ಲಕ್ಷಣ ತ್ಯಾಗ ಮತ್ತು ಸರಳತೆ, ಸ್ವಹಿತದ ಬಗ್ಗೆ ಯೋಚಿಸದೆ ಎಲ್ಲರ ಹಿತ ಕಾಪಾಡುವ ಸಮಷ್ಟಿಯ ಚಿಂತನೆ ​ಎಂದು ಅವರು ವಿವರಿಸಿದರು.
​ನಮ್ಮ ಸುತ್ತಲಿರುವ ಜನರ ಅಭಿಪ್ರಾಯಗಳನ್ನು ಸಂಗ್ರಹಿಸಿ, ಗೌರವಿಸುವುದೇ ನಿಜವಾದ ನಾಯಕತ್ವದ ಗುಣಗಳಾಗಿವೆ.​ ರಾಜಕಾರಣದಲ್ಲಿ ನಾವು ಗುರಿಗಳನ್ನು ಇಟ್ಟುಕೊಂಡು ಮುನ್ನಡೆಯಬೇಕಾಗಿದೆ. ರಾಜಕಾರಣವು ಟೈಮ್ ಪಾಸ್ ಜಾಬ್ ಅಲ್ಲ​,​ ಇದು ಪುಲ್ ಟೈಮ್ ಜಾಬ್ ಆಗಿದ್ದು, ರಾಜಕಾರಣಕ್ಕೆ ಅದರದೇ ಆದ ಮಹತ್ವವಿದೆ​ ಎಂದು ಹೆಬ್ಬಾಳಕರ್ ಹೇಳಿದರು​.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ರಾಜ್ಯ ವಿದ್ಯಾರ್ಥಿ ಕಾಂಗ್ರೆಸ್‌ನ ಉಸ್ತುವಾರಿಗಳಾದ ಆರ್. ದೃವನಾರಾಯಣ್, ವಿಧಾನ ಪರಿಷತ್ ಸದಸ್ಯರಾದ ​ ಬಿ.ಕೆ ಹರಿಪ್ರಸಾದ್, ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ​ ಬಿ.ಎಲ್ ಶಂಕರ್, ರಾಜ್ಯ ಎನ್‌ಎಸ್‌ಯುಐ ಅಧ್ಯಕ್ಷ​ ಕೀರ್ತಿ ಗಣೇಶ್ ಸೇರಿದಂತೆ ಎನ್‌ಎಸ್‌‌ಯು‌ಐ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button