Kannada NewsKarnataka News

ಸರ್ವಮಂಗಲಾ ಹಿರೇಮಠ ನಿಧನ; ದೇಹ ದಾನ ಮಾಡಿದ ಕುಟುಂಬಸ್ಥರು

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇಲ್ಲಿನ ರಾಮತೀರ್ಥ ನಗರದ ಸಮಾಜ ಸೇವಾ ಕಾರ್ಯಕರ್ತೆ  ಹಾಗೂ ಲಿಂಗಾಯತ ಸಮಾಜದ ಮುಖಂಡೆ  ಸರ್ವಮಂಗಲಾ ವೀರಯ್ಯಾ ಹಿರೇಮಠ (79)  ಮಂಗಳವಾರ ನಿಧನರಾದರು.
ತಮ್ಮ ಜೀವಿತಾವಧಿಯುದ್ದಕ್ಕೂ ಸಮಾಜ ಸೇವೆಯಲ್ಲಿ ತೋಡಗಿ ಸರ್ವರಿಗೂ ಒಳಿತನ್ನೇ ಬಯಸಿದ್ದ ಅವರು, ಯುವ ಪೀಳಿಗೆಗೆ ಆದರ್ಶ ಪ್ರಾಯದವರಾಗಿದ್ದರು. ಮೃತರ ಅಂತಿಮ ಆಶಯದಂತೆ ಅವರ ಪಾರ್ಥಿವ ಶರೀರವನ್ನು ಕುಟುಂಬ-ಪರಿವಾರದವರು ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕಾಗಿ ಬೈಲಹೊಂಗಲದ ಡಾ. ರಾಮಣ್ಣವರ ಚಾರಿಟೇಬಲ್‌ ಟ್ರಸ್ಟ್‌ ಮೂಲಕ ಬೆಳಗಾವಿ ಕೆಎಲ್‌ಇ ಸಂಸ್ಥೆಯ ಜವಹರಲಾಲ್‌ ನೆಹರು ವೈದ್ಯಕೀಯ ಮಹಾವಿದ್ಯಾಲಯಕ್ಕೆ ದಾನ ನೀಡಿ ಸಾರ್ಥಕ ಅಶ್ರುತರ್ಪಣೆ ಗೈದಿದ್ದಾರೆ.
ಮೃತರು ಪತಿ, ನಿವೃತ್ತ ಪಿಎಸ್‌ಐ ವೀರಯ್ಯಾ ಹಿರೇಮಠ,  ಪುತ್ರ ಬೆಳಗಾವಿ ನಗರಾಭಿವೃದ್ದಿ ಪ್ರಾಧಿಕಾರದ ಸಹಾಯಕ ಕಾರ್ಯಕಾರಿ ಅಭಿಯಂತರ ಎಂ.ವಿ. ಹಿರೇಮಠ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂದು ಬಳಗ ಅಗಲಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button