ದೇಶದಲ್ಲಿ 2ನೇ ಹಂತದ ಕೊರೊನಾ ಸೋಂಕು ಕಾಣಿಸಿಕೊಳ್ಳಲಿದೆ ಎಂದ ಏಮ್ಸ್ ನಿರ್ದೇಶಕ

ಪ್ರಗತಿವಾಹಿನಿ ಸುದ್ದಿ: ನವದೆಹಲಿ: ಕೊರೊನಾ ವೈರಸ್ ತಾತ್ಕಾಲಿಕವಲ್ಲ, ಇದು ವರ್ಷಗಳವರೆಗೆ ಇರಲಿದೆ. ಪ್ರಮುಖವಾಗಿ ಭಾರತದಲ್ಲಿ ಚಳಿಗಾಲದಲ್ಲಿ 2ನೇ ಹಂತದ ಕೊರೊನಾ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ದೆಹಲಿಯ ಏಮ್ಸ್ ಆಸ್ಪತ್ರೆಯ ನಿರ್ದೇಶಕ ಮತ್ತು ಕೇಂದ್ರ ಸರ್ಕಾರದ ಟಾಸ್ಕ್ ಫೋರ್ಸ್ ಸದಸ್ಯ ರಣದೀಪ್ ಗುಲೇರಿಯಾ ಆತಂಕ ವ್ಯಕ್ತಪಡಿಸಿದ್ದಾರೆ.

ಚೀನಾದ ಭೀತಿ ಭಾರತಕ್ಕೂ ಕಾಡಲು ಆರಂಭಿಸಿದ್ದು, ಸೋಂಕು ಚಳಿಗಾಲದಲ್ಲಿ 2ನೇ ಹಂತದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇದು ತಾತ್ಕಾಲಿಕ ಸೋಂಕಲ್ಲ. ವರ್ಷಕ್ಕೂ ಹೆಚ್ಚಿನ ಕಾಲದ ಸುದೀರ್ಘ ಯುದ್ಧ ಎಂದು ಭಾವಿಸಬೇಕು. ದೇಹದಲ್ಲಿ ಸುದೀರ್ಘ ಕಾಲದಲ್ಲಿರುವ ಸೋಂಕು ಮತ್ತೆ ಮತ್ತೆ ಕಾಣಿಸಿಕೊಳ್ಳಬಹುದು ಎಂದು ಡಾ.ರಣದೀಪ್ ಗುಲೇರಿಯಾ ಕಳವಳ ವ್ಯಕ್ತಪಡಿಸಿದ್ದಾರೆ.

ಕೊರೊನಾ ಸೂಚಿ ಭಾರತದಲ್ಲಿ ಇನ್ನೂ ಇಳಿಕೆ ಬಂದಿಲ್ಲ, ಸೋಂಕು ಏರಿಕೆಯಲ್ಲಿದೆ ಈ ನಡುವೆ ಲಾಕ್‍ಡೌನ್ ವಿನಾಯತಿ ನೀಡಿದ್ದು, ಮುಂದಿನ ದಿನಗಳಲ್ಲಿ ಮುನ್ನೆಚ್ಚರಿಕೆ ಕ್ರಮ ಅಗತ್ಯ ಸಮುದಾಯಕ್ಕೆ ಸೋಂಕು ಹರಡುವಿಕೆ ತಡೆಯುವುದು ಆಸ್ಪತ್ರೆಗಳ ಕೈಲಿಲ್ಲ. ಸಮುದಾಯದ ಸೋಂಕು ಹರಡುವುದು ತಡೆಯುವುದು ಜನರ ಕೈಯಲ್ಲಿದೆ. ಆದ್ದರಿಂದ ಜನರು ಹೆಚ್ಚು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button