Belagavi NewsBelgaum NewsKarnataka News

*ಮುಂಗಾರು ಆಲೂಗಡ್ಡೆ ಬೆಳೆಯ ಬಿತ್ತನೆಗೆ ಬೀಜೋಪಚಾರದ ಕ್ರಮಗಳು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ತಾಲ್ಲೂಕಿನಲ್ಲಿ ಸರಿಸುಮಾರು 1200-1500 ಹೇಕ್ಟರ್ ನಷ್ಟು ಪ್ರದೇಶದಲ್ಲಿ ಜೂನ್ 2 ಮತ್ತು 3ನೇ ವಾರದಲ್ಲಿ ಆಲೂಗಡ್ಡೆ ಬೆಳೆಯನ್ನು ನಾಟಿ ಮಾಡುತ್ತಾರೆ. ರೈತರು ಪ್ರಮಾಣಿಕೃತ, ರೋಗಮುಕ್ತ ಬೀಜಗಳನ್ನು ಆಯ್ಕೆ ಮಾಡಿ ಬಿತ್ತನೆ ಮಾಡುವುದು ಅತೀ ಅವಶ್ಯಕವಾಗಿರುತ್ತದೆ.

ಬಿತ್ತನೆಗೆ 15 ದಿವಸ ಮುಂಚಿತವಾಗಿ ಜೈವಿಕ ಗೊಬ್ಬರಗಳಾದ ಟ್ರೈಕೊಡರ್ಮಾ ಹಾರ್ಜಿಯಾನಂ 1 ಕೆ.ಜಿ ಮತ್ತು ಸೂಡೋಮೋನಾಸ್ ಪೂರೋಸೆನ್ಸ್ 1 ಕೆ.ಜಿ. ಅನ್ನು ಪ್ರತಿ ಟನ್ ಕೊಟ್ಟಿಗೆ ಗೊಬ್ಬರಕ್ಕೆ ಮಿಶ್ರಣ ಮಾಡಿ ಭೂಮಿಗೆ ಹಾಕಬೇಕು. ಬೀಜಗಳನ್ನು ಆಯ್ಕೆ ಮಾಡುವ ಸಮಯದಲ್ಲಿ ಕಡ್ಡಾಯವಾಗಿ ಶೀತಲ ಗೃಹದಿಂದ ತೆಗೆದ ನಂತರ 10-15 ದಿವಸಗಳ ಕಾಲ ಮಂದ ಬೆಳಕಿನಲ್ಲಿ ಗಾಳಿಯಾಡುವ ಸ್ಥಳದಲ್ಲಿ ತೆಳ್ಳಗೆ ಹರಡಿ ಹದಗೊಳಿಸಬೇಕು. ಬೀಜಗಳು ಕನಿಷ್ಠ 35-40 ಗ್ರಾಂ ಇದ್ದು, 2-3 ಉದ್ದವಾಗಿ ಉಬ್ಬಿದ ಕಣ್ಣುಗಳನ್ನು ಹೊಂದಿರಬೇಕು. ಪ್ರತಿ ಸಲ ಗಡ್ಡೆಯನ್ನು ಕತ್ತರಿಸುವಾಗ ಕುಡುಗೋಲನ್ನು ಅಲ್ಲೋಹಾಲ್, ಸ್ಪಿರಿಟ್ ಅಥವಾ ಪಾರ್ಮಲಿನ್‌ನಲ್ಲಿ ಅದ್ದ ಬೇಕು. ನಂತರ ಬೀಜದ ಗಡ್ಡೆಗಳನ್ನು ಮ್ಯಾಂಕೋಜೆಬ್ 4 ಗ್ರಾಂ + ಮೆಟಲಾಕ್ಸಿಲ್ 1 ಗ್ರಾಂ + ಸ್ಟೆಷ್ಟೊಮೈಸಿನ್ ಸಲ್ವೆಟ್ 0.5ಗ್ರಾಂ ಪ್ರತಿ ಲೀಟರ್ ದ್ರಾವಣದಲ್ಲಿ 10 ನಿಮಿಷ್ ನೆನೆಸಿ ಬೀಜೋಪಚಾರವನ್ನು ಮಾಡಿ 24 ಘಂಟೆಗಳ ಕಾಲ ನೆರಳಿನಲ್ಲಿ ಒಣಗಿಸಿ ಬಿತ್ತನೆ ಮಾಡಬೇಕು.

ತದನಂತರ, ಚೆನ್ನಾಗಿ ಹದಗೊಳಿಸಿದ ಭೂಮಿಯಲ್ಲಿ ಪ್ರತಿ ಹೇಕ್ಟರ್‌ಗೆ 25 ಟನ್ ನಂತೆ ಕೊಟ್ಟಿಗೆ ಗೊಬ್ಬರವನ್ನು ಬೇರೆಸಬೇಕು. 60×20 ಸೆಂ.ಮೀ. ಅಂತರದಲ್ಲಿ ಬಿತ್ತನೆ ಮಾಡಬೇಕು. ಬಿತ್ತಿದ ಸಾಲಿನಿಂದ 3 ಅಂಗಲ ದೂರಿನಲ್ಲಿ 75:75:100 (N.P.K)ನ್ನು ಪ್ರತಿ ಹೇಕ್ಟರ್‌ಗೆ ರಾಸಾಯನಿಕ ಗೊಬ್ಬರವನ್ನು ನೀಡುವುದು ಮತ್ತು ಉಳಿದ 50ರ ಸಾರಜನಕವನ್ನು ಗಿಡಗಳ ಬುಡಕ್ಕೆ 30-35 ದಿನಗಳ ನಂತರ ಮೇಲುಗೊಬ್ಬರವಾಗಿ ಕೊಡುವುದು. ಎಲ್ಲಾ ರೈತ ಬಾಂಧವರು ಸದರಿ ಕ್ರಮವನ್ನು ಅನುಸರಿಸಬೇಕು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು(ಜಿ.ಪಂ), ಬೆಳಗಾವಿ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Home add -Advt

Related Articles

Back to top button