Kannada NewsKarnataka NewsLatest

ಕೆಎಲ್ಎಸ್ ಆಡಳಿತ ಮಂಡಳಿ ಪದಾಧಿಕಾರಿಗಳ ಆಯ್ಕೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಉತ್ತರ ಕರ್ನಾಟಕದಲ್ಲಿ ಹೆಸರಾದ ಬೆಳಗಾವಿಯ ಕರ್ನಾಟಕ ಲಾ ಸೊಸೈಟಿ ೧೯೩೯ ರಲ್ಲಿ ಸ್ಥಾಪನೆಗೊಂಡು, ವಿವಿಧ ಕ್ಷೇತ್ರಗಳಲ್ಲಿ ಶಿಕ್ಷಣವನ್ನು ನೀಡುತ್ತದೆ. ಈ ಸಂಸ್ಥೆಯ ಅಮೃತ ಮಹೋತ್ಸವವನ್ನು ಇತ್ತೀಚಿಗೆ ಆಚರಿಸಲಾಯಿತು. ಈ ಸಂಸ್ಥೆಯ ೮೦ನೇ ವರ್ಷದ ಸರ್ವ ಸಾಮಾನ್ಯ ಆಡಳಿತ ಮಂಡಳಿಯ ಸಭೆಯು  ನಡೆದು, ೨೦೧೯-೨೦೨೧ನೆ ಸಾಲಿಗಾಗಿ ಆಡಳಿತ ಮಂಡಳಿಯನ್ನು ಆಯ್ಕೆ ಮಾಡಲಾಯಿತು.

ಅನಂತ ಮಂಡಗಿ ಅಧ್ಯಕ್ಷರು,  ರಾಮ್ ಭಂಡಾರಿ ಮತ್ತು ಡಿ.ವ್ಹಿ.ಕುಲಕರ್ಣಿ ಉಪಾಧ್ಯಕ್ಷರುಗಳು,  ಪಿ.ಎಸ್.ಸಾವಕಾರ್, ಕಾರ್ಯಾಧ್ಯಕ್ಷರು, ವ್ಹಿ.ಎಮ್.ದೇಶಪಾಂಡೆ ಮತ್ತು  ವಿ.ಜಿ.ಕುಲಕರ್ಣಿ (ಎಕ್ಜೆಂಬೇಕರ್), ಕಾರ್ಯದರ್ಶಿಗಳು. ಆಡಳಿತ ಸದಸ್ಯರುಗಳಾಗಿ ಎಮ್.ಆರ್.ಕುಲಕರ್ಣಿ, ಯು.ಎನ್.ಕಾಲಕುಂದ್ರಿಕರ್, ಎ.ಕೆ.ತಗಾರೆ, ಪಿ.ಜಿ.ಬಡಕುಂದ್ರಿ, ಎಸ್.ಪಿ.ಜೋಶಿ, ಆರ್.ಎಸ್.ಮುತಾಲಿಕ್, ಆರ್.ಕೆ.ಬೆಳಗಾಂವಕರ್, ಪಿ.ಎಸ್.ಕುಲಕರ್ಣಿ, ಪಿ.ಎನ್.ಕಠಾವಿ, ವಿ.ಎಸ್.ಲೊಕುರ್, ಎಸ್.ವಿ.ಗಣಾಚಾರಿ, ಉಜ್ವಲಾ ಮಂಡಗಿ, ಎ.ಎ.ಕುಲಕರ್ಣಿ ಮತ್ತು ಎ.ಕೆ.ಆಲೂರ್ ಇವರು ನೇಮಕಗೊಂಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button