Kannada NewsLatest

ಹಿರಿಯ ಪತ್ರಕರ್ತ ಅಶೋಕ ಯಾಳಗಿ ವಿಧಿವಶ

ಪ್ರಗತಿವಾಹಿನಿ ಸುದ್ದಿ;  ಬೆಳಗಾವಿ: ಹಿರಿಯ ಪತ್ರಕರ್ತ ಅಶೋಕ ಯಾಳಗಿ ಇಂದು ಹೃಧಯಾಘಾತದಿಂದ ವಿಧಿವಶರಾಗಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು.

ಬೆಳಗಾವಿಯ ವಿನಾಯಕ ನಗರದ ನಿವಾಸಿಯಾಗಿರುವ ಅಶೋಕ ಯಾಳಗಿ, ತರುಣ ಭಾರತ ದಿನಪತ್ರಿಕೆಯ ಮುಖ್ಯ ವರದಿಗಾರರಾಗಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಲೋಕಮಾನ್ಯ ಗ್ರಂಥಾಲಯ, ವಾಂಗ್ಮಯ ಚರ್ಚಾ ಮಂಡಳದ ಕಾರ್ಯಾಧ್ಯಕ್ಷರಾಗಿದ್ದರು.

ಯಾಳಗಿ ಅವರ ಅಂತ್ಯಕ್ರಿಯೆ ಮಧ್ಯಾಹ್ನ 12ಗಂಟೆಗೆ ಸದಾಶಿವ ನಗರದ ರುದ್ರಭೂಮಿಯಲ್ಲಿ ನಡೆಯಲಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button