Kannada NewsKarnataka NewsLatest

ಡಾ.ಪ್ರಭಾಕರ ಕೋರೆ ಭೇಟಿ ಮಾಡಿ ಆಶಿರ್ವಾದ ಪಡೆದ ಶಂಕರಗೌಡ ಪಾಟೀಲ

ಪ್ರಗತಿವಾಹಿನಿ ಸುದ್ದಿ, ​ಬೆಳಗಾವಿ – ಕರ್ನಾಟಕ ಸರ್ಕಾರದ ದೆಹಲಿ ವಿಶೇಷ  ಪ್ರತಿನಿಧಿಯಾಗಿ ಅಧಿಕಾರ ಸ್ವೀಕರಿಸಿದ ನಂತರ  ಪ್ರಪ್ರಥಮ ಬಾರಿಗೆ ಬೆಳಗಾವಿಗೆ ಆಗಮಿಸಿ​ರುವ​ ಶಂಕರಗೌಡ ಪಾಟೀಲ್ ​ಸೋಮವಾರ​ ಮಾಜಿ ರಾಜ್ಯಸಭಾ ಸದಸ್ಯ​, ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ್ ಕೋರೆ ಅವರ​ನ್ನು ಭೇಟಿ ಮಾಡಿ, ಆಶಿರ್ವಾದ ಪಡೆದರು. ​ 
​ ಅವರ ​ನಿವಾಸಕ್ಕೆ​ ತೆರಳಿದ ಶಂಕರಗೌಡ,​ ಪ್ರಭಾಕರ್ ಕೋರೆ ಅವರಿಗೆ ಶಾಲುಹೊದಿಸಿ​ ಸತ್ಕರಿಸಿದರು​.​ ​ ಕೋರೆಯವರ ಆಶೀರ್ವಾದ ಪಡೆದು​, ಆರೋಗ್ಯ ವಿಚಾರಿಸಿದರು​. ತಮ್ಮ ಮುಂದಿನ ಕೆಲಸಕಾರ್ಯಗಳಿಗೆ ಸದಾ ಸಲಹೆ, ಸಹಕಾರ ನೀಡಬೇಕೆಂದು ಕೋರೆಯವರಲ್ಲಿ ವಿನಂತಿಸಿದರು.​

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button