LatestUncategorized

*ನೂತನ ಸಚಿವರಿಗೆ ಖಾತೆ ಹಂಚಿಕೆ ಫೈನಲ್?; ಯಾರಿಗೆ ಯಾವ ಖಾತೆ?*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು; ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆಯಾಗಿದ್ದು, ಖಾತೆ ಹಂಚಿಕೆ ಕೂಡ ಮಾಡಲಾಗಿದೆ.

ವಿವಿಧ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಈ ಪಟ್ಟೆ ಹರಿದಾಡುತ್ತಿದೆ. ಆದರೆ ಈ ಪಟ್ಟಿ ನಕಲಿಯೋ, ಅಸಲಿಯೋ ಎನ್ನುವುದನ್ನು ಸರಕಾರ ಸ್ಪಷ್ಟಪಡಿಸಬೇಕಿದೆ.

Related Articles

ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದ್ದು, ಸಿಎಂ ಸಿದ್ದರಾಮಯ್ಯ ಬಳಿಯಲ್ಲಿಯೇ ಹಣಕಾಸು, ಸಂಪುಟ ವ್ಯವಹಾರ ಹಾಗೂ ಗುಪ್ತಚರ ಇಲಾಖೆ ಉಳಿಸಿಕೊಂಡಿದ್ದಾರೆ.

ಸಿಎಂ ಸಿದ್ದರಾಮಯ್ಯ- ಹಣಕಾಸು, ಸಂಪುಟ ವ್ಯವಹಾರ, ಗುಪ್ತಚರ ಇಲಾಖೆ
ಡಿಸಿಎಂ ಡಿ.ಕೆ.ಶಿವಕುಮಾರ್ – ಜಲಸಂಪನ್ಮೂಲ, ಬೆಂಗಳೂರು ನಗರಾಭಿವೃದ್ಧಿ
ಡಾ.ಜಿ.ಪರಮೇಶ್ವರ್ – ಗೃಹ ಖಾತೆ
ಹೆಚ್.ಕೆ.ಪಾಟೀಲ್ – ಕಾನೂನು ಮತ್ತು ಸಂಸದೀಯ ವ್ಯವಹಾರ
ಕೆ.ಹೆಚ್.ಮುನಿಯಪ್ಪ -ಆಹಾರ ಮತ್ತು ನಾಗರಿಕ ಸರಬರಾಜು
ಕೆ.ಜೆ.ಜಾರ್ಜ್ – ಇಂಧನ ಇಲಾಖೆ
ಎಂ.ಬಿ.ಪಾಟೀಲ್ – ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಐಟಿ, ಬಿಟಿ
ರಾಮಲಿಂಗಾರೆಡ್ಡಿ- ಸಾರಿಗೆ ಇಲಾಖೆ
ಪ್ರಿಯಾಂಕ್ ಖರ್ಗೆ- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
ಜಮೀರ್ ಅಹ್ಮದ್- ವಸತಿ, ವಕ್ಫ್ ಖಾತೆ
ಸತೀಶ್ ಜಾರಕಿಹೊಳಿ – ಲೋಕೋಪಯೋಗಿ ಇಲಾಖೆ
ಲಕ್ಷ್ಮೀ ಹೆಬ್ಬಾಳ್ಕರ್- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
ಮಂಕಾಳು ವೈದ್ಯ- ಮೀನುಗಾರಿಕೆ, ಬಂದರು ಮತ್ತು ಒಳಾಡಳಿತ ಸಾರಿಗೆ

ಶಿವರಾಜ್ ತಂಗಡಗಿ-ಹಿಂದುಳಿದ ವರ್ಗ, ಪರಿಶಿಷ್ಠ ವರ್ಗಗಳ ಕಲ್ಯಾಣ ಖಾತೆ
ಡಾ.ಶರಣಪ್ರಕಾಶ್ ಪಾಟೀಲ್-ಉನ್ನತ ಶಿಕ್ಷಣ ಇಲಾಖೆ
ಎಸ್.ಎಸ್.ಮಲ್ಲಿಕಾರ್ಜುನ-ಗಣಿ ಮತ್ತು ಭೂ ವಿಜ್ಞಾನ ಇಲಾಖೆ
ಆರ್.ಬಿ.ತಿಮ್ಮಾಪುರ-ಅಬಕಾರಿ, ಮುಜರಾಯಿ ಇಲಾಖೆ
ಶಿವಾನಂದ ಪಾಟೀಲ್-ಸಕ್ಕರೆ ಖಾತೆ
ಶರಣಬಸಪ್ಪ ದರ್ಶನಾಪೂರೆ- ಸಣ್ಣ ಕೈಗಾರಿಕೆ
ದಿನೇಶ್ ಗುಂಡೂರಾವ್-ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಈಶ್ವರ ಖಂಡ್ರೆ-ಅರಣ್ಯ ಖಾತೆ
ಕೆ.ಎನ್.ರಾಜಣ್ಣ-ಸಹಕಾರ ಇಲಾಖೆ
ಮಧು ಬಂಗಾರಪ್ಪ-ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ
ಡಾ.ಹೆಚ್.ಸಿ.ಮಹದೇವಪ್ಪ-ಸಮಾಜ ಕಲ್ಯಾಣ
ಕೆ.ವೆಂಕಟೇಶ್-ಪಶುಸಂಗೋಪನಾ
ಎನ್.ಚಲುವರಾಯಸ್ವಾಮಿ-ಕೃಷಿ ಖಾತೆ
ಕೃಷ್ಣಬೈರೇಗೌಡ -ಕಂದಾಯ
ಎಂ.ಸಿ.ಸುಧಾಕರ್-ವೈದ್ಯಕೀಯ ಶಿಕ್ಷಣ ಖಾತೆ
ಬೋಸರಾಜ್-ಪ್ರವಾಸೋದ್ಯಮ
ಸಂತೋಷ್ ಲಾಡ್- ಕಾರ್ಮಿಕ, ಕೌಶಲಾಭಿವೃದ್ಧಿ
ಭೈರತಿ ಸುರೇಶ್-ನಗರಾಭಿವೃದ್ಧಿ ಖಾತೆ
ಬಿ.ನಾಗೇಂದ್ರ-ಯುವಜನ ಮತ್ತು ಕ್ರೀಡಾ ಖಾತೆ ನೀಡಲಾಗಿದೆ.

https://pragati.taskdun.com/cm-siddaramaiahcabinetcongress-govt/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button