Belagavi NewsBelgaum NewsKannada NewsKarnataka NewsNationalPolitics

*ಬೆಳಗಾವಿಯ ಕಪಿಲೇಶ್ವರ ದೇವಸ್ಥಾನದಲ್ಲಿ ಶ್ರಾವಣ ಸೋಮವಾರದ ವಿಶೇಷ ಪೂಜೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ದಕ್ಷಿಣ ಕಾಶಿ ಎಂದ ಪ್ರಸಿದ್ದಿ ಹೊಂದಿರುವ ಬೆಳಗಾವಿಯ ಕಪಿಲೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ ಮೊದಲನೆಯ ಸೋಮವಾರದ ನಿಮಿತ್ತ ವಿಶೇಷ ಪೂಜೆ ನಡೆದಿದ್ದು, ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದಿದ್ದಾರೆ.‌

ಬೆಳಗಾವಿಯ ಶಾಹಾಪುರದಲ್ಲಿ ಇರುವ ಕಪಿಲೇಶ್ವರ ದೇವಸ್ಥಾನದಲ್ಲಿ ನಿನ್ನೆ ರಾತ್ರಿಯಿಂದಲೇ ಭಕ್ತರು ಸಾಲುಗಟ್ಟಿ ನಿಂತು, ದೇವರ ದರ್ಶನ ಪಡೆದಿದ್ದಾರೆ. ದೇವಸ್ಥಾನವನ್ನು  ವಿವಿಧ ಹೂಗಳಿಂದ ಅಲಾಂಕರ ಮಾಡಿ, ವಿವಿಧ ರೀತಿಯ ಪೂಜೆಗಳನ್ನು ಆಯೋಜನೆ ಮಾಡಲಾಗಿದೆ. 

ಇನ್ನೂ ನೇರೆಯ ಗೋವಾ, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ಭಕ್ತರು ಆಗಮಿಸುವದರಿಂದ ದಿನದ 24 ಗಂಟೆ ದೇವಸ್ಥಾನ ಓಪನ ಇಡಲಾಗುತ್ತೆ. ಶ್ರಾವಣ ಮಾಸದಲ್ಲಿ ಸೋಮುವಾರ ಪವಿತ್ರ ದಿನವಾಗಿದ್ದರಿಂದ ದೇವರ ಜ್ಞಾನ ಮಾಡುವದರ ಮೂಲಕ ಭಕ್ತಿ ಭಾವದಿಂದ ಪೂಜೆ ಜೋರಾಗಿ ಮಾಡಲಾಗಿದೆ. ಶ್ರಾವಣ ಮಾಸದಲ್ಲಿ ಪ್ರತಿ ದಿನಯು ವಿಶೇಷ ಪೂಜೆ ದೇವರಿಗೆ ನೇರವೆರಿಸಲಾಗುತ್ತದೆ ಎಂದು ಅರ್ಚಕ್ ಮುಂಜುನಾಥ್ ಭಟ್ ಅವರು ತಿಳಿಸಿದ್ದಾರೆ.‌

Home add -Advt

Related Articles

Back to top button