Latest

ಪೈಗಂಬರರ ಕುರಿತು ಬರಹ ಆರೋಪ: ಬೆಂಗಳೂರಿನಲ್ಲಿ ಭಾರಿ ದಾಂಧಲೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಮಹಮ್ಮದ್ ಪೈಗಂಬರರ ಕುರಿತು ವ್ಯಕ್ತಿಯೋರ್ವರು  ಫೇಸ್ ಬುಕ್ ನಲ್ಲಿ ಬರಹ ಬರೆದಿದ್ದಾರೆ ಎಂದು ಆರೋಪಿಸಿ ಮುಸ್ಲಿಂ ಸಮಾಜದ ಜನರು ಬೆಂಗಳೂರಿನಲ್ಲಿ ಭಾರಿ ದಾಂದಲೆ ನಡೆಸುತ್ತಿದ್ದಾರೆ.

ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಸಂಬಂಧಿ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದಾರೆ ಎಂದು ಆರೋಪಿಸಿ ಶಾಸಕರ ಮನೆ ಸೇರಿದಂತೆ ಸಿಕ್ಕಸಿಕ್ಕಲ್ಲಿ ದಾಳಿ ಮಾಡಿ, ಬೆಂಕಿ ಹಚ್ಚಿ, ಕಲ್ಲು ತೂರಾಟ ನಡೆಸಿ ದಾಂದಲೆ ನಡೆಸಲಾಗುತ್ತಿದೆ. ಪೊಲೀಸರು ಕೂಡ ಸ್ಥಳಕ್ಕೆ ಬಾರದಂತೆ ಗಲಾಟೆ ನಡೆಸಲಾಗುತ್ತಿದ್ದು, ಎಲ್ಲಿ ಏನು ನಡೆಯುತ್ತಿದೆ ಎನ್ನುವುದೂ ತಿಳಿಯದಂತೆ ದಾಂದಲೆ ನಡೆಯುತ್ತಿದೆ.

ಕಾವಲ್ ಭೈರಸಂದ್ರ ಪ್ರದೇಶ ಹೊತ್ತಿ ಉರಿಯುತ್ತಿದ್ದು, ಗಲಭೆ ನಿಯಂತ್ರಣಕ್ಕೆ ಬರುತ್ತಿಲ್ಲ. ಶಾಸಕ ಜಮೀರ್ ಅಹ್ಮದ್ ಕಾನ್ ಸ್ಥಳಕ್ಕೆ ತೆರಳಿದ್ದು, ಸಂದಾನ ಯತ್ನ ನಡೆಸುತ್ತಿದ್ದಾರೆನ್ನಲಾಗಿದೆ. ಪ್ರತಿಭಟನೆ ಇನ್ನಷ್ಟು ಜೋರಾಗುವ ಸಾಧ್ಯತೆ ಇದ್ದು, ನಾಳೆಯೂ ಮುಂದುವರಿಸುವುದಾಗಿ ಮುಸ್ಲಿಂ ಮುಖಂಡರು ಹೇಳುತ್ತಿದ್ದಾರೆ.

ಮಾಧ್ಯಮ ಪ್ರತಿನಿಧಿಗಳ ಮೇಲೂ ದಾಳಿಯಾಗಿದೆ. ಪೊಲೀಸರೂ ಕೈಚೆಲ್ಲುವಂತಹ ಸ್ಥಿತಿ ಮುಂದುವರಿದಿದ್ದು, ಗೂಂಡಾಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆನ್ನುವ ಆಗ್ರಹ ಕೇಳಿಬರುತ್ತಿದೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button