
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಧ್ಯಪ್ರದೇಶದಿಂದ ಕಿತ್ತೂರಿಗೆ ಬಂದಿದ್ದ 28 ಜನ ಕಾರ್ಮಿಕರನ್ನು ಹಾಗೂ ಐದು ಜನ ಮಕ್ಕಳನ್ನು ರಕ್ಷಿಸಿ ಅವರನ್ನು ದಿನಾಂಕ 28 ಜನವರಿ ರಂದು ನಿಜಾಮುದ್ದೀನ್ ಎಕ್ಸ್ಪ್ರೆಸ್ ರೈಲು ಮೂಲಕ ಪುನಃ ಅವರ ಮೂಲ ಸ್ಥಳವಾದ ಮಧ್ಯಪ್ರದೇಶದ ಕೌದಿಯಾ , ಕಟ್ನಿ ಜಿಲ್ಲೆಗಳಿಗೆ ಕಳುಹಿಸಿ ಕೊಡಲಾಯಿತು.
ಬಸ್ ನಿಲ್ದಾಣದಲ್ಲಿ ಅಸಹಾಯಕರಾಗಿ ನಿಂತಿರುವ ಕಾರ್ಮಿಕರನ್ನು ಖಚಿತ ಮಾಹಿತಿಯ ಮೇರೆಗೆ ದಿನಾಂಕ 27 ಜನವರಿ ಸಾಯಂಕಾಲ ತಹಸೀಲ್ದಾರ್ ಕಿತ್ತೂರ ಹಾಗೂ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಅವರನ್ನು ಬಸ್ಸಿನಲ್ಲಿ ಕರೆದುಕೊಂಡು ಬಂದು ಬೆಳಗಾವಿ ನಗರದಲ್ಲಿರುವ ನಿರ್ಗತಿಕ ಕೇಂದ್ರದಲ್ಲಿ ಇರಿಸಿ ದಿನಾಂಕ 28ರಂದು ರೈಲು ಮೂಲಕ ಮಧ್ಯಪ್ರದೇಶಕ್ಕೆ ಕಳುಹಿಸಿ ಕೊಡಲಾಗಿದೆ.
ಅಸಹಾಯಕ ಕಾರ್ಮಿಕರು ಹಾಗೂ ಮಕ್ಕಳ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಇವರ ಮಾರ್ಗದರ್ಶನದಲ್ಲಿ, ಬೈಲಹೊಂಗಲ ಉಪವಿಭಾಗಾಧಿಕಾರಿ ಶಶಿಧರ್ ಬಗಲಿ, ಕಿತ್ತೂರು ತಹಶೀಲ್ದಾರ ಅಷ್ಟಗಿಮಠ, ಕಾರ್ಮಿಕ ಇಲಾಖೆಯ ಅಧಿಕಾರಿಗಳಾದ ಜ್ಯೋತಿಕಾಂತೆ, ರಾಜೇಶ್ ಅಸ್ನೋಟೀಕರ್ ಇವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
*ಹಿರಿಯ ನಟ ಮನ್ ದೀಪ್ ರಾಯ್ ಇನ್ನಿಲ್ಲ*
https://pragati.taskdun.com/sandalwoodsenior-actor-mandeep-royno-more/
*ಮೂವರು ಮಕ್ಕಳೊಂದಿಗೆ ನೀರಿನ ಸಂಪ್ ಗೆ ಹಾರಿ ತಾಯಿ ಆತ್ಮಹತ್ಯೆ*
https://pragati.taskdun.com/mother3-childrensuicidevijayapura/
ಸದಭಿಮಾನದ ಗೂಡು ಖಾಲಿಯಾಗುವತ್ತ. ಕನ್ನಡಿಗರ ಮನದ ನೆಲ ಬೋಳು ಬೋಳಾಗುವತ್ತ – ಒಂದು ವಿಚಾರ.
https://pragati.taskdun.com/the-nest-of-goodwill-is-empty-the-floor-of-the-kannadigas-mind-is-becoming-empty-an-idea/