Cancer Hospital 2
Bottom Add. 3

*ಹೃದಯಾಘಾತದಿಂದ ಬಸ್ ನಲ್ಲೇ ಸಾವನ್ನಪ್ಪಿದ ಪ್ರಯಾಣಿಕ*

ಪ್ರಗತಿವಾಹಿನಿ ಸುದ್ದಿ; ಮೈಸೂರು: ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿಯೇ ಪ್ರಯಾಣಿಕರೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಮೈಸೂರಿನ ನಂಜನಗೂಡು ತಾಲೂಕಿನಲ್ಲಿ ನಡೆದಿದೆ.

ವೀರದೇವನಹಳ್ಳಿಯಲ್ಲಿ ಈ ದುರಂತ ಸಂಭವಿಸಿದೆ. ಚುಂಚನಹಳ್ಳಿ ನಿವಾಸಿ ಸುರೇಶ್ (50) ಮೃತ ವ್ಯಕ್ತಿ. ನಂಜನಗೂಡಿನಿಂದ ಚುಂಚನಹಳ್ಳಿಗೆ ತೆರಳುತ್ತಿದ್ದ ವೇಳೆ ಬಸ್ ನಲ್ಲಿಯೇ ಸುರೇಶ್ ಎಂಬುವವರಿಗೆ ಹೃದಯಾಘಾತವಾಗಿದೆ. ಬಸ್ ನಲ್ಲಿಯೇ ಪ್ರಯಾಣಿಕ ಉಸಿರು ಚಲ್ಲಿದ್ದಾರೆ.

ಕವಲಂದೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆದರೆ ಯಾವುದೇ ಪ್ರಕರಣ ದಾಖಲಾಗಿಲ್ಲ.


Bottom Add3
Bottom Ad 2

You cannot copy content of this page