ಗೋವಾ ಸಿಎಂ ಭೇಟಿ ಮಾಡಿದ ಜೊಲ್ಲೆ ದಂಪತಿ

ಪ್ರಗತಿವಾಹಿನಿ ಸುದ್ದಿ, ಪಣಜಿ – ಗೋವಾ ಮುಖ್ಯಮಂತ್ರಿ  ಪ್ರಮೋದ್ ಸಾವಂತ ರವರನ್ನು  ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಹಿರಿಯ ನಾಗರಿಕರ ಸಬಲೀಕರಣ ಆಹಾರ ಮತ್ತು ನಾಗರಿಕ ಸರಬರಾಜು  ಹಾಗೂ ಗ್ರಾಹಕ ಖಾತೆ ಸಚಿವರಾದ  ಶಶಿಕಲಾ ಜೊಲ್ಲೆ ಹಾಗೂ ಚಿಕ್ಕೋಡಿ  ಲೋಕಸಭಾ  ಸಂಸದರಾದ  ಅಣ್ಣಾಸಾಹೇಬ ಜೊಲ್ಲೆ  ಭೇಟಿ ಮಾಡಿ, ಹಲವು ವಿಷಯಗಳ ಕುರಿತು ಚರ್ಚಿಸಿದರು.
ಈ ಸಂದರ್ಭದಲ್ಲಿ ಶ್ರೀ ಬೀರೇಶ್ವರ ಕೋ- ಆಪ್ ಕ್ರೆಡಿಟ್  ಸೊಸೈಟಿ  ಅಧ್ಯಕ್ಷರಾದ  ಜಯಾನಂದ ಜಾಧವ, ನಿರ್ದೇಶಕರಾದ   ಯಾಸಿನ ತಾಂಬುಳಿ,  ಸುನೀಲ ದೇಶಪಾಂಡೆ,  ಉಪಪ್ರಧಾನ ವ್ಯವಸ್ಥಾಪಕ  ಬಹದ್ದೂರ ಗುರವ ಅವರು ಉಪಸ್ಥಿತರಿದ್ದರು.

Related Articles

Back to top button