Kannada NewsKarnataka NewsLatest

ಡಿಸಿ ಬಂಗ್ಲೆಯಲ್ಲಿ ಗುಂಡುಹಾರಿಸಿಕೊಂಡ ಪೊಲೀಸ್

https://youtu.be/Hr6vFH2jUf4

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಲ್ಲಿಯ ಜಾಧವನಗರ ಬಳಿ ಇರುವ ಜಿಲ್ಲಾಧಿಕಾರಿಗಳ ಬಂಗ್ಲೆ ಕಾವಲಿಗಿದ್ದ ಪೊಲೀಸ್ ಪೇದೆಯೊಬ್ಬ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇಂದು ಬೆಳಗಿನಜಾವ ಈ ಘಟನೆ ನಡೆದಿದೆ. ಪ್ರಕಾಶ ಗುರಯ್ಯನವರ್ (35) ಆತ್ಮಹತ್ಯೆ ಮಾಡಿಕೊಂಡ ಪೇದೆ. ತಲೆಗೆ 2 ಸುತ್ತು ಗುಂಡು ಹಾರಿಸಿಕೊಂಡಿದ್ದಾನೆಂದು ಗೊತ್ತಾಗಿದೆ. ನಿಖರ ಕಾರಣ ಗೊತ್ತಾಗಿಲ್ಲ. ಕಿತ್ತೂರು ಮೂಲದವನಾದ ಪ್ರಕಾಶ್ ಗೆ ಪತ್ನಿ, ಮಕ್ಕಳಿದ್ದಾರೆ.

ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Home add -Advt

 

Related Articles

Back to top button