Latest

ಬೀದಿ ನಾಯಿ ಕಚ್ಚಿದ್ದಕ್ಕೆ ಲಸಿಕೆ ಪಡೆದರೂ ಬದುಕುಳಿಯದ ವಿದ್ಯಾರ್ಥಿನಿ

ಪ್ರಗತಿ ವಾಹಿನಿ ಸುದ್ದಿ, ಕಾಸರಗೋಡು: ಬೀದಿ ನಾಯಿ ಕಚ್ಚಿದ್ದಕ್ಕೆ ಲಸಿಕೆ ಪಡೆದರೂ ಫಲಕಾರಿಯಾಗದೆ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟಿದ್ದಾಳೆ.

ಕೇರಳ ರಾಜ್ಯದ ಪಾಲಕ್ಕಾಡ್ ಜಿಲ್ಲೆಯ ಮಂಕಾರದಲ್ಲಿ ಈ ಘಟನೆ ನಡೆದಿದೆ. ಶ್ರೀಲಕ್ಷ್ಮೀ (19) ಎಂಬ ಯುವತಿ ಮೃತಪಟ್ಟವಳು. ಈಕೆಗೆ ಮೇ 30ರಂದು ಬೀದಿ ನಾಯಿ ಕಚ್ಚಿತ್ತು. ಸ್ಥಳೀಯ ಆಸ್ಪತ್ರೆಯಲ್ಲಿ ಇದಕ್ಕೆ ಚಿಕಿತ್ಸೆ ಪಡೆದಿದ್ದ ಯುವತಿ ವೈದ್ಯರ ಸಲಹೆಯಂತೆ ರೆಬಿಸ್ ಲಸಿಕೆ ಪಡೆದಿದ್ದಳೆನ್ನಲಾಗಿದೆ.

ಆದಾಗ್ಯೂ ನಂತರದಲ್ಲಿ ತೀವ್ರ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತ್ರಿಶೂರ್ ನ ಸರಕಾರಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಗುರುವಾರ ಆಕೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ.

ಈ ಘಟನೆ ಕುರಿತು ತನಿಖೆ ಕೈಗೊಂಡು ವರದಿ ಸಲ್ಲಿಸುವಂತೆ ಕೇರಳ ರಾಜ್ಯದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅಲ್ಲಿನ ಆರೋಗ್ಯ ಇಲಾಖೆಗೆ ಸೂಚಿಸಿದ್ದಾರೆ.

Home add -Advt

ವ್ಯಕ್ತಿ ಶಿರಚ್ಛೇದನ ಪ್ರಕರಣ; ಮತ್ತೆ ಮೂವರ ಬಂಧನ

Related Articles

Back to top button