
ಪ್ರಗತಿವಾಹಿನಿ ಸುದ್ದಿ, ನವದೆಹಲಿ – ಭಾರತೀಯ ಸೇನಾ ಬಲವನ್ನು ಆಧುನೀಕರಣಗೊಳಿಸುವುದು, 101 ರಕ್ಷಣಾ ಉತ್ಪನ್ನಗಳ ಆಮದು ಬ್ಯಾನ್ ಮಾಡುವುದು ಸೇರಿದಂತೆ ಹಲವು ಮಹತ್ವದ ನಿರ್ಧಾರಗಳನ್ನು ಕೇಂದ್ರ ಸರಕಾರ ಪ್ರಕಟಿಸಿದೆ. ತನ್ಮೂಲಕ ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರ್ ಯೋಜನೆ ಜಾರಿಯಾಗಲಿದೆ.
ಈ ಕುರಿತು ರಕ್ಷಣಾ ಸಚಿವ ರಾಜನಾಥ ಸಿಂಗ್ ಟ್ವೀಟ್ ಮಾಡಿದ್ದಾರೆ.
3.5 ಲಕ್ಷ ಕೋಟಿ ರೂ. ವೆಚ್ಚದಲ್ಲಿ ರಕ್ಷಣಾ ಉತ್ಪನ್ನವನ್ನು ಭಾರತವೇ ಉತ್ಪಾದನೆ ಮಾಡಲು, 4 ಲಕ್ಷ ಕೋಟಿ ರೂ. ಗಳನ್ನು ಭಾರತೀಯ ಸಂಸ್ಥೆಗಳಿಗೆ ಆತ್ಮನಿರ್ಭರ್ ಯೋಜನೆಯ ಅಡಿಯಲ್ಲಿ ನೆರವು ನೀಡಲು ನಿರ್ಧರಿಸಲಾಗಿದೆ.
ಒಟ್ಟಾರೆ ರಕ್ಷಣಾ ಕ್ಷೇತ್ರದಲ್ಲೂ ಭಾರತೀಯ ಕಂಪನಿಗಳಿಗೇ ಆದ್ಯತೆ ನೀಡಲುವ ಕೇಂದ್ರದ ಮಹತ್ವದ ಘೋಷಣೆ ಇದಾಗಿದೆ.