Belagavi NewsBelgaum News

*ಕುರಾನ್ ಸುಟ್ಟ ಪ್ರಕರಣ ಸಿಐಡಿಗೆ ವರ್ಗಾವಣೆ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ತಾಲೂಕಿನ ಸಂತಿ ಬಸ್ತವಾಡ ಗ್ರಾಮದಲ್ಲಿ ಧರ್ಮಗ್ರಂಥ ಕುರಾನ್ ಸುಟ್ಟ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ. 

ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ಅಪರಾಧ ಸಂಖ್ಯೆ. 100/2025 ಕಲಂ. 329 (4), 326 (ಜಿ), 298, 299, 196 (1) (B), BNS-2023 ಈ ಪ್ರಕರಣವನ್ನು ಸಿಐಡಿ ತಂಡ ತನಿಖೆ ವಹಸಿಕೊಂಡು ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಕಿಡಿಗೇಡಿಗಳು ಮುಸ್ಲಿಂ ಸಮಾಜದ ಜನರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಉದ್ದೇಶದಿಂದ ಮಸೀದಿಯಿಂದ ಕುರಾನ್ ಪುಸ್ತಕ ಕದ್ದು, ಬಳಿಕ ಕುರಾನ ಮೇಲೆ ಚಪ್ಪಲಿ ಇಟ್ಟು ಬೆಂಕಿ ಹಚ್ಚಿ ಸುಟ್ಟು, ಮುಸ್ಲಿಂ ಸಮಾಜದ ಜನರ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ್ದಾರೆ. ಸಧ್ಯ ಈ ಪ್ರಕರಣವನ್ನು ಸಿಐಡಿ ಘಟಕದ ತನಿಖಾಧಿಕಾರಿಗಳಾದ ಸುಲೇಮಾನ ತಹಸಿಲ್ದಾರ (ಡಿ.ಎಸ್.ಪಿ) ಹಾಗೂ ಅವರ ತಂಡದಿಂದ ತನಿಖೆ ಕೈಕೊಳ್ಳಲಾಗಿದೆ.

Home add -Advt

Related Articles

Back to top button