Kannada NewsKarnataka NewsLatest
ತಹಸಿಲ್ದಾರ ಸಂಗಮೇಶ ಬಾಡಗಿ ಹಠಾತ್ ನಿಧನ; ಮೂಲತಃ ಅಥಣಿ ತಾಲೂಕಿನವರು, ಸಧ್ಯ ಮುಧೋಳದಲ್ಲಿ ಕೆಲಸ

ಪ್ರಗತಿವಾಹಿನಿ ಸುದ್ದಿ, ಮುಧೋಳ – ಮುಧೋಳ ತಹಸಿಲ್ದಾರರಾಗಿದ್ದ ಸಂಗಮೇಶ ಬಾಡಗಿ ಹಠಾತ್ ನಿಧನರಾಗಿದ್ದಾರೆ. ಅವರಿಗೆ 38 ವರ್ಷ ವಯಸ್ಸಾಗಿತ್ತು.
ಶುಕ್ರವಾರ ಬೆಳಗಿನಜಾವ ಮುಧೋಳದ ತಮ್ಮ ಮನೆಯಲ್ಲೇ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ.
2 ವರ್ಷದಿಂದ ಮುಧೋಳದಲ್ಲಿ ತಹಸಿಲ್ದಾರರಾಗಿದ್ದ ಅವರು ಮೂಲತಃ ಅಥಣಿ ತಾಲೂಕಿನ ಜನವಾಡದವರು. ನಿನ್ನೆ ಹೆಂಡತಿ ಮತ್ತು ಮಗಳನ್ನು ಜನವಾಡದಲ್ಲಿ ಬಿಟ್ಟು ವಾಪಸ್ ಮುಧೋಳಕ್ಕೆ ಬಂದು ರಾತ್ರಿ 2 ಗಂಟೆಗ ತಮ್ಮ ಮನೆಯಲ್ಲಿ ಮಲಗಿದ್ದರು. ಆದರೆ ರಾತ್ರಿಯೇ ಅವರಿಗೆ ಹೃದಯಾಘಾತವಾಗಿದೆ.
ಅವರ ಮಿತ್ರರೊಬ್ಬರು ಸಹ ಮನೆಯಲ್ಲಿದ್ದರು.
ಮುಖ್ಯಮಂತ್ರಿಗಳ ಎದುರೇ ಆತ್ಮಹತ್ಯೆಗೆ ಯತ್ನಿಸಿದ ವೃದ್ಧ
ಬಿಜೆಪಿ ಕಾರ್ಯಕಾರಿಣಿ ಸಭೆ ದಿಢೀರ್ ಮುಂದೂಡಿಕೆ