Karnataka News

*ದೇವಸ್ಥಾನಗಳ ಕಾಣಿಕೆ ಹಣ ಬಳಕೆ: ಬೋರ್ಡ್ ಹಾಕಲು ಮುಜರಾಯಿ ಇಲಾಖೆ ನಿರ್ಧಾರ*

ಪ್ರಗತಿವಾಹಿನಿ ಸುದ್ದಿ: ಆಯಾ ದೇವಸ್ಥಾನಗಳ ಹುಂಡಿ ಹಣ, ಕಾಣಿಕೆ ಹಣವನ್ನು ಅದೇ ದೇವಸ್ಥಾನಗಳ ಅಭಿವೃದ್ದಿಗೆ ವಿನಿಯೋಗಿಸಲಾಗುವುದು. ಈ ಬಗ್ಗೆ ಮುಜರಾಯಿ ದೇವಾಲಯಗಳ ಮುಂದೆ ಬೋರ್ಡ್ ಅಳವಡಿಸಲು ಸರ್ಕಾರ ಮುಂದಾಗಿದೆ.

ಮುಜರಾಯಿ ದೇವಸ್ಥಾನಗಳಲ್ಲಿ ಭಕ್ತರು ನೀಡುವ ಕಾಣಿಕೆ ಹಣ ಅನ್ಯಧರ್ಮದವರಿಗೆ ಧಾರೆ ಎರೆಯಲಾಗುತ್ತಿದೆ ಎಂಬ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಸರ್ಕಾರ ಇದೀಗ ವಿಶೇಷ ಬೋರ್ಡ್ ಅಳವಡಿಸಲು ನಿರ್ಧರಿಸಿದೆ.

Home add -Advt

ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾದಾಯ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ 34,564 ಅಧಿಸೂಚಿತ ಸಂಸ್ಥೆಗಳಿವೆ. ಇದರಲ್ಲಿ ಪ್ರವರ್ಗ ಎ ಅಡಿಯಲ್ಲಿ 205, ಪ್ರವರ್ಗ ಬಿ ಅಡಿಯಲ್ಲಿ 193 ಹಾಗೂ ಪ್ರವರ್ಗ ಸಿ ಅಡಿಯಲ್ಲಿ 34166 ದೇವಸ್ಥಾನಗಳಿವೆ. ಈ ದೇವಸ್ಥನಗಳ ಮುಂದೆ ಡಿಸೆಂಬರ್ ಬಳಿಕ ಹಂತಹಂತವಾಗಿ ಬೋರ್ಡ್ ಅಳವಡಿಸಲಾಗುತ್ತದೆ.

ಈ ಮುಜರಾಯಿ ದೇವಸ್ಥಾನದ ಹಣವನ್ನು ಈ ದೇವಸ್ಥಾನದ ಅಭಿವೃದ್ಧಿಗೆ ಬಳಸಲಾಗುತ್ತದೆ. ಅನ್ಯ ಉದ್ದೇಶಕ್ಕೆ ಬಳಸುವುದಿಲ್ಲ ಎಂದು ದೇವಳಕ್ಕೆ ಬರುವ ಭಕ್ತರಿಗೆ ಎದ್ದುಕಾಣುವಂತೆ ಬೋರ್ಡ್ ಹಾಕಲಾಗುತ್ತದೆ. ಈ ಮೂಲಕ ಭಕ್ತರಲ್ಲಿ ಮುಡೂವ ಸಂಶಯ ದೂರ ಮಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತುದೆ.

Related Articles

Back to top button