Kannada NewsKarnataka NewsLatest

ಬಿಜೆಪಿ ಎರಡೇ ಜಾತಿಗಳನ್ನು ಓಲೈಸುತ್ತಿದೆ, ನಮಗೆ ಎಲ್ಲರೂ ಬೇಕು – ಡಿ.ಕೆ.ಶಿವಕುಮಾರ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಭಾರತೀಯ ಜನತಾ ಪಾರ್ಟಿ ಮತಕ್ಕಾಗಿ ಕೇವಲ ಲಿಂಗಾಯತ ಮತ್ತು ಮರಾಠಾ ಸಮಾಜವನ್ನು ಓಲೈಸುತ್ತಿದೆ. ನಮಗೆ ಎಲ್ಲರೂ ಬೇಕ. ಲಿಂಗಾಯತರೂ ನಮ್ಮ ಅಣ್ಣ ತಮ್ಮಂದಿರೇ, ಮರಾಠರೂ ನಮ್ಮ ಸಹೋದರರೇ, ಪರಿಶಿಷ್ಠ ಜಾತಿ ಜನಾಂಗದವರೂ ನಮ್ಮವರೇ ಎಂದು ಕೆಪಿಸಿಸಿ ಅಧ್ಯಕ್ಷ ಡೆ.ಕೆ.ಶಿವಕುಮಾರ ಟಾಂಗ್ ಕೊಟ್ಟಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಜಾತಿ ಆಧಾರದ ಮೇಲೆ ಮತ ಕೇಳುವುದಿಲ್ಲ. ಅವರಿಗೆ ಅವೆರಡೇ ಜಾತಿ ಬೇಕಿರಬಹುದು. ನಮಗೆ ಎಲ್ಲರೂ ಬೇಕು ಎಂದು ಹೇಳಿದರು.

ನಾನು ಬೆಳಗಾವಿಯಲ್ಲಿ ಹಲವಾರು ಹಿರಿಯರನ್ನು, ಮಠಾಧೀಶರನ್ನು ಭೇಟಿಯಾಗಿ ಮಾತನಾಡುತ್ತಿದ್ದೇನೆ, ಆಶಿರ್ವಾದ ಕೇಳುತ್ತಿದ್ದೇನೆ. ರೈತರೇ ಹೆಚ್ಚಾಗಿರುವ ಇಲ್ಲಿ ರೈತರ ಸ್ವಾಭಿಮಾನ ಕಾಪಾಡುವ ಕೆಲಸ ಆಗಬೇಕಿದೆ. ಬಿಜೆಪಿಯಿಂದ ಅದು ಸಾಧ್ಯವಿಲ್ಲ. ಹಾಗಾಗಿ ಎಲ್ಲರೂ ಬಿಜೆಪಿ ಸರಕಾರ ಕಿತ್ತೊಗೆಯಬೇಕೆನ್ನುವ ಭಾವನೆ ವ್ಯಕ್ತಪಡಿಸುತ್ತಿದ್ದಾರೆ ಎಂದು ಶಿವಕುಮಾರ ಹೇಳಿದರು.

ಸಾರಿಗೆ ಸಂಸ್ಥೆಯ ನೌಕರರ ಬೇಡಿಕೆಗಳನ್ನು ಸರಕಾರ ಸಹಾನುಭೂತಿಯಿಂದ ಆಲಿಸಬೇಕು. ಅವರ ಬೇಡಿಕೆಗಳಿಗೆ ನಮ್ಮ ಬೆಂಬಲವಿದೆ ಎಂದು ಅವರು ಹೇಳಿದರು.

ಚುನಾವಣೆ ಹೊಸ್ತಿಲಲ್ಲಿ ಬಿಜೆಪಿಗೆ ದೊಡ್ಡ ಹೊಡೆತ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button