ಸರ್ವಸಮ್ಮತ ತೀರ್ಪು ನೀಡಿದ ಐವರು ನ್ಯಾಯಾಧೀಶರು

ಪ್ರಗತಿವಾಹಿನಿ ಸುದ್ದಿ, ನವದೆಹಲಿ -ಶತಮಾನದ ಅಯೋಧ್ಯಾ ವಿವಾದಕ್ಕೆ ಸರ್ವೋಚ್ಛ ನ್ಯಾಯಾಲಯದ ಐವರು ನ್ಯಾಯಾಧೀಶರು ಸರ್ವಸಮ್ಮತ ತೀರ್ಪು ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ –ಅಯೋಧ್ಯಾ ತೀರ್ಪು ಪ್ರಕಟ: ವಿವಾದಿತ ಭೂಮಿ ರಾಮಲಲ್ಲಾ ಪಾಲು
ವಿವಾದಿತ 2.7 ಎಕರೆ ಜಮೀನು ರಾಮಲಲ್ಲಾಗೆ ಸೇರಿದ್ದು. ಅಲ್ಲಿ ರಾಮಮಂದಿರ ನಿರ್ಮಾಣವಾಗಲಿ. ಸರಕಾರವೇ ಮಂದಿರ ನಿರ್ಮಾಣ ಮಾಡಬೇಕು. ಸುನ್ನಿ ಬೋರ್ಡ್ ಗೆ ಪ್ರತ್ಯೇಕವಾಗಿ, ಬೇರೆ ಸ್ಥಳದಲ್ಲಿ 5 ಎಕರೆ ಭೂಮಿ ನೀಡಬೇಕು ಎಂದು ಕೋರ್ಟ್ ಹೇಳಿದೆ. ಇದರಿಂದಾಗಿ ವಿವಾದ ಅಂತ್ಯವಾದಂತಾಗಿದೆ.
ಶ್ರೀ ರಾಮ ಜನ್ಮ ಭೂಮಿಯಲ್ಲೇ ಮಂದಿರ ನಿರ್ಮಾಣವಾಗಬೇಕು. ರಾಮಂದಿರ ನಿರ್ಮಾಣಕ್ಕೆ ಕಾನೂನು ರೂಪಿಸಬೇಕು. 3 ತಿಂಗಳಲ್ಲಿ ಒಂದು ಸಮೀತಿ ರಚಿಸಿ, ಪ್ರಕ್ರಿಯೆ ಆರಂಭಿಸಿ. ಮಂದಿರ ನಿರ್ಮಾಣದ ಹೊಣೆಯನ್ನು ಸರಕಾರ ನಿರ್ವಹಿಸಬೇಕು. ಸುನ್ನಿಬೋರ್ಡ್ ಗೆ 5 ಎಕರೆ ಬೇರೆ ಸ್ಥಳ ನೀಡಬೇಕು. ಅಲ್ಲಿ ಮಂದಿರ ನಿರ್ಮಾಣ ಮಾಡುವುದು, ಬಿಡುವುದು ಅವರಿಗೆ ಬಿಟ್ಟಿದ್ದು ಎಂದು ಕೋರ್ಟ್ ಸ್ಪಷ್ಟವಾಗಿ ತಿಳಿಸಿದೆ.
ಇದೇ ವೇಳೆ ಸುನ್ನಿ ಬೋರ್ಡ್ ಪರ ವಕೀಲರು ತೀರ್ಪು ಮರು ಪರಿಶೀಲನೆಗೆ ಮನವಿ ಮಾಡುವುದಾಗಿ ತಿಳಿಸಿದ್ದಾರೆ.
ಅಯೋಧ್ಯೆ ಪ್ರಕರಣದ ಸಂಪೂರ್ಣ ಇತಿಹಾಸ ಇಲ್ಲಿದೆ




