
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಉದ್ಯಮಬಾಗ ಪೊಲೀಸ್ ಠಾಣಾ ಹದ್ದಿಯ ರಾಯಣ್ಣ ನಗರದಲ್ಲಿ ದಿನಾಂಕ. 23/02/2023 ರಂದು ಕಾವೇರಿ ಮೋಹನ ನಾಯಕರ್ ರವರ ಮನೆಯಲ್ಲಿಟ್ಟ ಬಂಗಾರ, ಬೆಳ್ಳಿ ಆಭರಗಣಗಳನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋದ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ದಿನಾಂಕ 20/05/2023 ರಂದು ಆರ್ ಎಸ್ ಬಿರಾದಾರ ಪಿಐ ಉದ್ಯಮಬಾಗ ಹಾಗೂ ಅವರ ತಂಡ ಆರೋಪಿ ಪತ್ತೆ ಹಚ್ಚಿದೆ.
1] ಪರುಶರಾಮ ಈರಪ್ಪಾ ದಂಡಗಲ, (21) ಸಾ|| ಗುರುದೇವಗಲ್ಲಿ ಲಕ್ಷ್ಮಿ ನಗರ ವಡಗಾಂವ ಬೆಳಗಾವಿ
ಈತನನ್ನು ವಶಕ್ಕೆ ಪಡೆದುಕೊಂಡು ಆತನಿಂದ 2,74,000/- ರೂಪಾಯಿ ಮೌಲ್ಯದ ಬಂಗಾರ ಮತ್ತು ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡು ಕಾನೂನು ಕ್ರಮ ಜರುಗಿಸಲಾಗಿದೆ.
ಪ್ರಕರಣ ಪತ್ತೆ ಮಾಡಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ಉದ್ಯಮಬಾಗ ಪೊಲೀಸ್ ಠಾಣೆಯ ಪಿಐ ಮತ್ತು ಸಿಬ್ಬಂದಿ ತಂಡದ ಕಾರ್ಯವನ್ನು ಪೊಲೀಸ್ ಆಯುಕ್ತರು, ಡಿಸಿಪಿ ಶ್ಲಾಘಿಸಿದ್ದಾರೆ.