Belagavi NewsBelgaum NewsEducationKannada NewsKarnataka NewsLatest

ಪ್ರತಿಭಾವಂತ ವಿದ್ಯಾರ್ಥಿಗೆ ಸಿಎಂ ಭೇಟಿ ಮಾಡಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಬೆಂಗಳೂರು – ಬೆಳಗಾವಿ ಗ್ರಾಮೀಣ‌ ಕ್ಷೇತ್ರದ ಪ್ರತಿಭಾವಂತ ವಿದ್ಯಾರ್ಥಿ ಮುತಗಾ ಗ್ರಾಮದ ರಾಜು ದರೆಪ್ಪಗೋಳ, ಅಖಿಲ ಭಾರತೀಯ ವೈದ್ಯಕೀಯ ಪರೀಕ್ಷೆಯಲ್ಲಿ (ಎನ್ ಇಇಟಿ) ಉತ್ತಮ ಅಂಕಗಳಿಸಿದ್ದು, ಮುಂದೆ ವೈದ್ಯಕೀಯ ಪದವಿ  (ಎಂಬಿಬಿಎಸ್) ಸೇರುವ ಕನಸು ಹೊಂದಿದ್ದಾನೆ.  ಈ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಶುಕ್ರವಾರ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿಸಿ, ವೈದ್ಯಕೀಯ ಕೋರ್ಸ್ ಗೆ ಸೇರ್ಪಡೆಗೆ ಅವಕಾಶ ಮಾಡಿಕೊಡಬೇಕೆಂದು  ಮನವಿ ಮಾಡಿಕೊಳ್ಳಲಾಯಿತು. ಈ ವೇಳೆ ರಾಜು ಅವರ ತಂದೆ ಕನ್ನಪ್ಪ ಬಾಗಪ್ಪ ದರೆಪ್ಪಗೋಳ, ತಾಯಿ ಕಲ್ಲವ್ವ ಕೂಡ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button