Latest

ಕಟ್ಟಿ ಶಿವಲಿಂಗಕ್ಕೆ ಸೂರ್ಯ ಕಿರಣಗಳ ಸಿಂಚನ

ಪ್ರಗತಿವಾಹಿನಿ ಸುದ್ದಿ, ವಿಜಯನಗರ: ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಹಿರೇಹಡಗಲಿ ಶ್ರೀ ಕ್ಷೇತ್ರದಲ್ಲಿ ಇಂದು ಬೆಳಗ್ಗೆ ಶ್ರೀ ಕಟ್ಟಿ ಬಸವೇಶ್ವರ ದೇವಾಲಯದ ಶಿವಲಿಂಗಕ್ಕೆ ಸೂರ್ಯ ಕಿರಣಗಳ ಸಿಂಚನವಾಗುವ ಮೂಲಕ ಆಸ್ತಿಕರ ಅಧ್ಯಾತ್ಮಿಕ ಆಸಕ್ತಿ ಇಮ್ಮಡಿಗೊಳಿಸಿದೆ.

ಚಾಲುಕ್ಯರ ಕಾಲದಲ್ಲಿ ನಿರ್ಮಾಣಗೊಂಡ ಈ ದೇಗುಲದ ಶಿವಲಿಂಗವನ್ನು ‘ಕಟ್ಟಿಲಿಂಗ’ ಎಂದೇ ಕರೆಯುತ್ತಾರೆ. ನಾನಾ ಕಡೆಗಳ ಭಕ್ತಾದಿಗಳು ಈ ದೇಗುಲಕ್ಕೆ ನಿತ್ಯ ಭೇಟಿ ನೀಡಿ ಶಿವಸಾನ್ನಿಧ್ಯದಲ್ಲಿ ಮನಸ್ಸು ಶಾಂತಗೊಳಿಸಿಕೊಂಡು ತೆರಳುತ್ತಾರೆ.

Home add -Advt

ಇದರ ನಿರ್ಮಾಣವೇ ವಿಶೇಷ ಹಾಗೂ ವಿಶಿಷ್ಟವಾಗಿದ್ದು ಪುರಾತನ ವಾಸ್ತು ತಜ್ಞತೆ ಹಾಗೂ ಶಿಲ್ಪಿಗಳ ಕೈಚಳಕದ ಫಲವಾಗಿ ಪ್ರತಿ ವರ್ಷ ಯುಗಾದಿ ಅಮಾವಾಸ್ಯೆಗೆ ಇಲ್ಲಿನ ಶಿವಲಿಂಗ ಹಾಗೂ ನಂದಿ ಮೇಲೆ ಸೂರ್ಯನ ಬೆಳಕು ಚೆಲ್ಲುತ್ತದೆ.

ಈ ಬಾರಿಯ ಈ ದೃಶ್ಯವನ್ನು ಅಪಾರ ಸಂಖ್ಯೆಯ ಭಕ್ತಾದಿಗಳು ಕಣ್ತುಂಬಿಕೊಂಡಿದ್ದು ಜಾಲತಾಣಗಳಲ್ಲೂ ವೈರಲ್ ಆಗಿದೆ.

https://pragati.taskdun.com/mudalagi-is-a-mantra-of-unity-peace-harmony/
https://pragati.taskdun.com/siddaramaiahfansprotestbangalorekolara-contest/
https://pragati.taskdun.com/d-k-shivakumarurigowdananjegowda-issuebjp/

Related Articles

Back to top button