Kannada NewsKarnataka NewsLatest

ಬಿಜೆಪಿ ಗೆಲ್ಲಿಸಿ ಗುಲಾಲ್ ಹಾರಿಸುವವರೆಗೆ ವಿಶ್ರಮಿಸುವುದಿಲ್ಲ

ಪ್ರಗತಿವಾಹಿನಿ ಸುದ್ದಿ, ಅಥಣಿ  -ಬಿಜೆಪಿಯಲ್ಲಿ ಯಾವುದೇ ಗೊಂದಲವಿಲ್ಲ. ಸಹಜವಾಗಿ ಹೊಸ ಕಾರ್ಯಕರ್ತರು ಪರಸ್ಪರ ಸಮ್ಮಿಲನವಾದಾಗ ಮೂಲ ಕಾರ್ಯಕರ್ತರ ಹಾಗೂ ಹೊಸ ಕಾರ್ಯಕರ್ತರಲ್ಲಿ ಅಲ್ಪಮಟ್ಟಿನ ಗೊಂದಲವಿರುತ್ತದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.
 ಶನಿವಾರ ಮುಖ್ಯಮಂತ್ರಿ ಯಡಿಯೂರಪ್ಪ ಆಗಮಿಸುವ ಹಿನ್ನೆಲೆಯಲ್ಲಿ ಜೆ ಎ ಕಾಲೇಜಿನಲ್ಲಿ  ಸಭೆಯ ಸಿದ್ಧತೆ ಕಾರ್ಯವನ್ನು ಪರಿಶೀಲಿಸಲು ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
 ನಾನು ಮೊದಲು 2004 ರಲ್ಲಿ ಜೆಡಿಯುನಲ್ಲಿ ಇದ್ದಾಗ ಇಂತಹ ಅನುಭವ ನನಗಿದೆ. ಅಲ್ಲದೆ ನಾಳೆ ಮುಖ್ಯಮಂತ್ರಿಗಳ ಕಾರ್ಯಕ್ರಮ ಇರುವುದರಿಂದ ನಮ್ಮಲ್ಲಿ ಹೊಸ ಹುರುಪು ಹುಮ್ಮಸ್ಸು ತುಂಬಿದೆ . ಈ ಚುನಾವಣೆಯಲ್ಲಿ ಮಹೇಶ್ ಕುಮಟಳ್ಳಿ ಹಾಗೂ ಶ್ರೀಮಂತ ಪಾಟೀಲ್ ಇವರು ವಿಜಯಿಯಾಗಿ ಗುಲಾಲು ಹಾರಿಸುವವರೆಗೆ  ನಾವು ವಿಶ್ರಮಿಸುವುದಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ, ಅಥಣಿ ಮತಕ್ಷೇತ್ರದ ಚುನಾವಣಾ ಉಸ್ತುವಾರಿ ಶ್ರೀಕಾಂತ್ ಕುಲಕರ್ಣಿ ಹಾಗೂ ಶಶಿಕಾಂತ ನಾಯಕ, ಚಿಕ್ಕೋಡಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಸುಶೀಲ್ ಕುಮಾರ ಪತ್ತಾರ ಇನ್ನಿತರರು ಉಪಸ್ಥಿತರಿದ್ದರು

Related Articles

Back to top button