Kannada NewsKarnataka News

ಬೆಳಗಾವಿ: ಬೆಚ್ಚಿಬೀಳಿಸಿದ ಹೈಸ್ಕೂಲ್ ವಿದ್ಯಾರ್ಥಿಯ ಮರ್ಡರ್; ಕೊಲೆಗೈದ ಹದಿಹರೆಯದವರು ಪೊಲೀಸ್ ಬಲೆಗೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಯ ಹೈಸ್ಕೂಲ್ ವಿದ್ಯಾರ್ಥಿಯನ್ನು ಕೊಲೆ ಮಾಡಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಓರ್ವ 19 ವರ್ಷದ ಯುವಕ ಮತ್ತು ಇಬ್ಬರು ಅಪ್ರಾಪ್ತ ಬಾಲಕರು ಸೇರಿ ಕೊಲೆ ಮಾಡಿರುವುದು ತನಿಖೆಯಿಂದ ಪತ್ತೆಯಾಗಿದೆ.
  ಬೆಳಗಾವಿಯ ಖಾಸಗಿ ಹೈಸ್ಕೂಲ್ ನಲ್ಲಿ ಎಸ್ ಎಸ್ ಎಲ್ ಸಿ ಓದುತ್ತಿದ್ದ ಬಾಲಕ ಪ್ರಜ್ವಲ್ ಶಿವರಾಯ ಕರೆಗಾರ ಎಂಬುವವನನ್ನು ತಾಲೂಕಿನ ಮುಚ್ಚಂಡಿ ಗ್ರಾಮದ ಹೊರವಲಯದಲ್ಲಿ ಅ. 19 ರಂದು ಕೊಲೆ ಮಾಡಲಾಗಿತ್ತು.
ಪ್ರಜ್ವಲ್ ಅ. 18 ರಂದು ಮಧ್ಯಾಹ್ನ ಶಾಲೆಯಿಂದ ಯಾರದ್ದೋ ಜತೆ ಬೈಕ್ ನಲ್ಲಿ  ತೆರಳಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಕೊಲೆ ಮಾಡಿದ ಆರೋಪಿಗಳಾದ ಲಕ್ಷ್ಮಣ ಯಲ್ಲಪ್ಪಾ ಹೊಸಮನಿ (19) ಹಾಗೂ ಇನ್ನಿಬ್ಬರು ಅಪ್ರಾಪ್ತ ಬಾಲಕರನ್ನು ಬಂಧಿಸಿದ್ದಾರೆ‌‌. ಕೊಲೆಗೆ ವಯಕ್ತಿಕ ದ್ವೇಷವೇ ಕಾರಣ ಎಂದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ.
https://pragati.taskdun.com/local/a-high-school-student-murdered-in-muchchandi-village-of-belagavi/

Related Articles

Back to top button