Karnataka NewsLatest

*ಶುಭಕಾರ್ಯಕ್ಕೆಂದು ಹೋಗಿದ್ದಾಗ ಘೋರ ದುರಂತ: ಸಮುದ್ರದಲ್ಲಿ ಮುಳುಗಿ ಇಬ್ಬರು ಯುವಕರು ಸಾವು*

ಪ್ರಗತಿವಾಹಿನಿ ಸುದ್ದಿ: ಸ್ನೇಹಿತರಿರೊಂದಿಗೆ ಈಜಲು ಹೋಗಿದ್ದ ಯುವಕರಿಬ್ಬರೂ ಸಮುದ್ರ ಪಾಲಾಗಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೀಜಾಡಿಯಲ್ಲಿ ನಡೆದಿದೆ.

ಶುಭಕಾರ್ಯಕ್ಕೆಂದು ಬೆಂಗಳೂರಿನಿಂದ ಉಡುಪಿಗೆ ಕುಟುಂಬವೊಂದು ತೆರಳಿತ್ತು. ಈ ವೇಳೆ ನಾಲ್ಕೈದು ಜನ ಯುವಕರ ಗುಂಪು ಬೀಜಾಡಿಯಲ್ಲಿ ಸಮುದ್ರಕ್ಕೆ ಈಜಲು ತೆರಳಿದ್ದಾರೆ. ಈ ವೇಳೆ ಸಮುದ್ರದ ಅಲೆಗಳಿಗೆ ಸಿಲುಕಿದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಬೆಂಗಳೂರಿನ ದಾಸರಹಳ್ಳಿ ನಿವಾಸಿ ಸಂತೋಷ್ ಹಾಗೂ ಕುಂದಾಪುರದ ಅಜಯ್ ಮೃತ ಯುವಕರು. ಸಮುದ್ರದಲ್ಲಿ ಅಲೆಗಳು ಪ್ರಕ್ಷುಬ್ಧಗೊಂಡಿದ್ದರೂ ಯುವಕರು ನಿರ್ಲಕ್ಷ ಮಾಡಿ ಇಂದು ಬೆಳಿಗ್ಗೆ ಈಜಲು ಹೋಗಿದ್ದಾರೆ. ಈ ವೇಳೆ ಅಲೆಗಳ ಹೊಡೆತಕ್ಕೆ ಸಿಲುಕಿ ಇಬ್ಬರೂ ಮೃತಪಟ್ಟಿದ್ದಾರೆ. ಉಳಿದವರನ್ನು ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button