Latest

ಕೇಂದ್ರ ಸಚಿವರ ಪುತ್ರನ ಕಾರು ಭೀಕರ ಅಪಘಾತ

ಪ್ರಗತಿವಾಹಿನಿ ಸುದ್ದಿ; ಲಖನೌ: ಕೇಂದ್ರ ಸಚಿವ ಪಂಕಜ್ ಚೌದರಿ ಪುತ್ರ ರೋಹಿತ್ ಚೌದರಿ ಕಾರು ಭೀಕರ ಅಪಘಾತಕ್ಕೀಡಾದ ಘಟನೆ ಉತ್ತರ ಪ್ರದೇಶದ ಮಹಾರಾಜ್ ಗಂಜ್ ಜಿಲ್ಲೆಯ ಪರ್ತವಾಲ್-ಕಪ್ತಂಗಂಜ್ ರಸ್ತೆಯಲ್ಲಿ ನಡೆದಿದೆ.

ಕಬ್ಬು ತುಂಬಿದ ವಾಹನಕ್ಕೆ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಕೇಂದ್ರ ಸಚಿವರ ಪುತ್ರ ರೋಹಿತ್ ಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ರೋಹಿತ್ ಚೌದರಿ ಬಿಹಾರದಿಂದ ತಮ್ಮ ಖಾಸಗಿ ವಾಹನದಲ್ಲಿ ಮಹಾರಾಜ್ ಗಂಜ್ ನಿವಾಸಕ್ಕೆ ತೆರಳುತ್ತಿದ್ದರು. ದಟ್ಟಮಂಜು ಹಿನ್ನೆಲೆಯಲ್ಲಿ ರಸ್ತೆ ಸರಿಯಾಗಿ ಕಾಣದೇ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.
ಜನರಿಗೆ ಬೆಳಗಾವಿ ಪೊಲೀಸರ ವಾರ್ನಿಂಗ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button