Kannada NewsKarnataka News

ಬೆಳಗಾವಿಯಲ್ಲಿ ಮಹನೀಯರ ಪ್ರತಿಮೆಗಳಿಗೆ ಗೌರವ ಸಲ್ಲಿಸಿ ಚುನಾವಣೆ ಪ್ರಚಾರ ಆರಂಭಿಸಿದ ಯುಪಿ ಡಿಸಿಎಂ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್   ಪ್ರಸಾದ್ ಮೌರ್ಯ ಹಾಗೂ ರಾಷ್ಟ್ರೀಯ ಕಾರ್ಯದರ್ಶಿ, ಸಂಸದ  ಹರೀಶ್ ದ್ವಿವೇದಿ ಅವರು ಬೆಳಗಾವಿಯ ವಿವಿಧೆಡೆಯಲ್ಲಿರುವ  ಇತಿಹಾಸದ ಮಹನೀಯರ  ಪ್ರತಿಮೆಗಳಿಗೆ  ಮಾಲಾರ್ಪಣೆ  ಗೈದು ಬುಧವಾರ ಪ್ರಚಾರ ಕಾರ್ಯ ಆರಂಭಿಸಿದರು.

ಬೆಳಗಾವಿ  ದಕ್ಷಿಣ ಮತಕ್ಷೇತ್ರದ  ಅಧಿಕೃತ ಅಭ್ಯರ್ಥಿ  ಅಭಯ ಪಾಟೀಲರವರ  ಚುನಾವಣೆ ಪ್ರಚಾರ ಹಿನ್ನೆಲೆಯಲ್ಲಿ   ಸಾಮಾಜಿಕ  ಚಿಂತಕರು,  ಮಹಾಪುರುಷರುಗಳಾದ   ಛತ್ರಪತಿ  ಶಿವಾಜಿ  ಮಹಾರಾಜರ ಪ್ರತಿಮೆ,  ಪೀರನವಾಡಿಯ  ಕ್ರಾಂತಿ ವೀರ  ಸಂಗೊಳ್ಳಿ ರಾಯಣ್ಣನ  ಪ್ರತಿಮೆ  ಮಾಲಾರ್ಪಣೆ  ಮಾಡಿದರು.

 ನಂತರ ಉತ್ತರ  ಮತಕ್ಷೇತ್ರದಲ್ಲಿ   ಸಂಭಾಜಿ ಮಹಾರಾಜರ  ಪ್ರತಿಮೆ, ಸಂವಿಧಾನ  ಶಿಲ್ಪಿ ಡಾ, ಬಾಬಾ ಸಾಹೇಬ್  ಅಂಬೇಡ್ಕರ್  ಪ್ರತಿಮೆ  ಹಾಗೂ ವೀರರಾಣಿ  ಕಿತ್ತೂರ ರಾಣಿ  ಚೆನ್ನಮ್ಮರ  ಪ್ರತಿಮೆಗೆ ಮಾಲಾರ್ಪಣೆ  ಮಾಡುವ ಮೂಲಕ  ಮಹಾಪುರುಷ  ದರ್ಶನ ಪಡೆದರು.

ಈ ಸಂದರ್ಭದಲ್ಲಿ   ದಕ್ಷಿಣ  ಮತಕ್ಷೇತ್ರದ  ಅಭ್ಯರ್ಥಿಯಾದ  ಅಭಯ  ಪಾಟೀಲ,  ಬೆಳಗಾವಿ  ದಕ್ಷಿಣ  ಮಂಡಲದ  ಪ್ರಭಾರಿಗಳಾದ  ವೀರೇಶ್  ಸಂಗಳದ,  ಬೆಳಗಾವಿ  ದಕ್ಷಿಣ ಮಂಡಲದ  ವಿಸ್ತಾರಕ ಹರೀಶ್  ಮಲ್ಲಾರಿ ಹಾಗೂ  ನಗರಸೇವಕರು  ಉಪಸ್ಥಿತರಿದ್ದರು.

Home add -Advt

Related Articles

Back to top button