Kannada News

ಬೆಳಗಾವಿ: ನಿಯಮ ಗಾಳಿಗೆ ತೂರಿ ಶಾಲಾ ಮಕ್ಕಳ ಸಾಗಾಟ; 2 ವಾಹನ ವಶ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಿಯಮಾವಳಿಗಳನ್ನು ಗಾಳಿಗೆ ತೂರಿ ನಿಗದಿಗಿಂತ ಹೆಚ್ಚು ಶಾಲೆ ಮಕ್ಕಳನ್ನು ತುಂಬಿಕೊಂಡು ಹೋಗುತ್ತಿದ್ದ ಓಮ್ನಿ ಸಹಿತ ಎರಡು ವಾಹನಗಳನ್ನು ಸಾರಿಗೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. 

ಶುಕ್ರವಾರ ಶಾಲಾ ಮಕ್ಕಳನ್ನು ಕುರಿಗಳಂತೆ ವಾಹನದಲ್ಲಿ ತುಂಬಿಕೊಂಡು ಹೋಗಲಾಗುತ್ತಿತ್ತು. ಈ ವೇಳೆ ವಾಹನ ತಡೆದ ಸಾರಿಗೆ ಅಧಿಕಾರಿಗಳು ಎರಡೂ ವಾಹನಗಳ ವಿರುದ್ಧ ಕೇಸು ದಾಖಲಿಸಿ ವಾಹನಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.

ಯಾವುದೇ ದುರ್ಘಟನೆ ನಂತರ ಕಟ್ಟುನಿಟ್ಟಾಗಿ ಕೆಲ ದಿನ ಮಾತ್ರ ಜಾರಿಯಿರುತ್ತಿದ್ದ ನಿಯಮಾವಳಿ ಅನಂತರದಲ್ಲಿ ಗಾಳಿಗೆ ತೂರಿ ಹೋಗುತ್ತಿತ್ತು. ಈ ಬಗ್ಗೆ ಯಾರೂ ಪ್ರಶ್ನಿಸುತ್ತಲೂ ಇರಲಿಲ್ಲ. ಇದೀಗ ಈ ಕಾರ್ಯಾಚರಣೆಯಿಂದ ಸುರಕ್ಷತೆಯ ಕ್ರಮಗಳ ಬಗ್ಗೆ ಜಾಗೃತವಾಗುವಂತಾಗಿದೆ.

ನಿವೃತ್ತಿ ಎಂಬುದು ಬಿ.ಎಸ್.ವೈ ಡಿಕ್ಷನರಿಯಲ್ಲಿಯೇ ಇಲ್ಲ ಎಂದ ಬಿ.ವೈ.ವಿಜಯೇಂದ್ರ

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button