Latest

ಭೀಕರ ಅಪಘಾತ; ಶಾಸಕರ ಅಳಿಯ ಸೇರಿ ನಾಲ್ವರ ದುರ್ಮರಣ

ಪ್ರಗತಿವಾಹಿನಿ ಸುದ್ದಿ; ವಿಜಯಪುರ: ಸರ್ಕಾರಿ ಬಸ್ ಹಾಗೂ ಕಾರಿನ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಕಾರಿನಲ್ಲಿದ್ದ ನಾಲ್ವರು ಸಾವನ್ನಪ್ಪಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.

ಸೋಲಾಪುರದ ನಾದೇಂಡ ಮೂಲದ ಚಿದಾನಂದ ನಾಗೇಶ್ ಸೂರ್ಯವಂಶಿ (45), ಶಾಸಕ ದೇವಾನಂದ ಚವ್ಹಾಣ್ ಅಳಿಯ ವಿಜಯಕುಮಾರ್ ದೊಡಮನಿ (32), ಸೋಮನಾಥ ಕಾಳೆ (43), ಸಂದೀಪ ಪವಾರ (40) ಮೃತರು.

ವಿಜಯಪುರ ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಈ ಅಪಘಾತ ಸಂಭವಿಸಿದ್ದು, ಮೃತರು ಮಹಾರಾಷ್ಟ್ರದ ನಾಂದೇಡ ಮೂಲದವರು ಎನ್ನಲಾಗಿದೆ. ಸರ್ಕಾರಿ ಬಸ್ ಹಾಗೂ ಫಾರ್ಚುನರ್ ಕಾರು ಮುಖಾಮುಖಿ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.

ಒಮಿಕ್ರಾನ್ ಭೀತಿ; ಗಡಿಯಲ್ಲಿ ಆರೋಗ್ಯ ಸಿಬ್ಬಂದಿಗಳೇ ನಾಪತ್ತೆ

Home add -Advt

Related Articles

Back to top button